ಹಲ್ಲೆ ನಡೆಸಿ ನಗ-ನಗದು ಲೂಟಿ: ದೂರು

Update: 2016-05-30 18:24 GMT

ಬ್ರಹ್ಮಾವರ, ಮೇ 30: ನವಯುಗ ಕಂಪೆನಿಗೆ ಸೇರಿದ ಕಾರ್ಮಿಕರು ಯಡ್ತಾಡಿಯ ಕರುಣಾಕರ ಹೆಗ್ಡೆ ಹಾಗೂ ನಿತ್ಯಾನಂದ ಶೆಟ್ಟಿ ಎಂಬವರಿಗೆ ಹಲ್ಲೆ ನಡೆಸಿ ನಗ-ನಗದು ದೋಚಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಯಡ್ತಾಡಿ ಗ್ರಾಮದ ಗೋಳಿಮರ ಬಸ್ ನಿಲ್ದಾಣದ ಬಳಿ ಮೇ 29ರಂದು ರಾತ್ರಿ 10:30ರ ಸುಮಾರಿಗೆ ಈ ಘಟನೆ ನಡೆದಿದೆ. ಕರುಣಾಕರ ಹೆಗ್ಡೆ ಹಾಗೂ ನಿತ್ಯಾನಂದ ಶೆಟ್ಟಿ ತಮ್ಮ ಕಾರಿನಲ್ಲಿ ಬಾರ್ಕೂರಿನಿಂದ ಯಡ್ತಾಡಿಗೆ ಬರುತ್ತಿದ್ದ ವೇಳೆ ಅಜಾಗರೂಕತೆಯಿಂದ ಲಾರಿ ಚಲಾಯಿಸುತ್ತಿದ್ದ ಚಾಲಕ ನೊಬ್ಬನನ್ನು ಪ್ರಶ್ನಿಸಿದರೆನ್ನಲಾಗಿದೆ. ಈ ವೇಳೆ ಹಲ್ಲೆಗೆ ಯತ್ನಿ ಸಿದ ಲಾರಿ ಚಾಲಕ ಬೊಬ್ಬೆ ಹಾಕಿ ನವಯುಗ ಕಂಪೆನಿಯ ಒಳಗಿರುವ ಸುಮಾರು 60ರಿಂದ 70 ಕಾರ್ಮಿಕರು ಹಾಗೂ ಉಗ್ರಾಣದ ಮ್ಯಾನೇಜರ್‌ನನ್ನು ಸ್ಥಳಕ್ಕೆ ಕರೆಯಿಸಿದನೆೆನ್ನಲಾಗಿದೆ. ಈ ವೇಳೆ ಅವರು ಕರುಣಾಕರ್ ಹಾಗೂ ನಿತ್ಯಾನಂದ ಶೆಟ್ಟಿ ಮೇಲೆ ಹಲ್ಲೆ ನಡೆಸಿ 1.61 ಲಕ್ಷ ರೂ. ನಗದು ಹಾಗೂ 4 ಪವನ್ 20ಗ್ರಾಂ ಚಿನ್ನದ ರಗಳನ್ನು ದೋಚಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News