ರಂಝಾನ್ ಉಪವಾಸ: ಸರಕಾರಿ ಕೆಲಸಕ್ಕೆ ರಿಯಾಯಿತಿ
Update: 2016-05-31 20:02 IST
ಮಂಗಳೂರು, ಮೇ 31: ರಂಝಾನ್ ಉಪವಾಸದ ಸಂದರ್ಭದಲ್ಲಿ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಅಧಿಕಾರಿ ಮತ್ತು ನೌಕರ ವರ್ಗಕ್ಕೆ ಅರ್ಧ ಗಂಟೆ ಮುಂಚಿತವಾಗಿ ಕಚೇರಿಯಿಂದ ಹೊರಡಲು ಅವಕಾಶ ಮಾಡುವಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾರ್ಯದರ್ಶಿ ನಿರ್ದೇಶನ ಹೊರಡಿಸಿದ್ದಾರೆ.
ಸರಕಾರಿ ಸುತ್ತೋಲೆ ಉಲ್ಲೇಖಿಸಿ, ಆಯೋಗದ ಅಧ್ಯಕ್ಷರ ನಿರ್ದೇಶನದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳಿಗೆ ಪತ್ರ ಬರೆದಿರುವ ಅವರು, ರೋಜಾ(ಉಪವಾಸ) ಆಚರಿಸುವವರಿಗೆ ಮಾತ್ರ ಅರ್ಧ ಗಂಟೆ ಬೇಗ ನಿರ್ಗಮಿಸಲು ಅನುಮತಿ ನೀಡಲು ಅಧೀನ ಕಚೇರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದ್ದಾರೆ.