ಬೆಳ್ತಂಗಡಿ: ಅಪಘಾತದ ಗಾಯಾಳು ಮೃತ್ಯು
Update: 2016-06-01 21:38 IST
ಬೆಳ್ತಂಗಡಿ, ಜೂ. 1: ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಹಸವಾರೊಬ್ಬರು ಮೃತಪಟ್ಟಿದ್ದಾರೆ.
ಉಜಿರೆಯಲ್ಲಿ ಮೂರು ದಿನಗಳ ಹಿಂದೆ ಧರ್ಮಸ್ಥಳದ ಅಶೋಕ ನಗರದ ಬಂಗುರ ಎಂಬವರ ಮಗ ಮಂಜು(29) ರಾಜೇಶ್ ಎಂಬವರ ಬೈಕಿನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದ ತನ್ನ ಮಾವನನ್ನು ನೋಡಲು ಬರುತ್ತಿದ್ದರು. ಈ ಸಂದರ್ಭ ಉಜಿರೆ ಪಂಚಮಿ ವಸತಿ ಗೃಹದ ಬಳಿ ಬೈಕ್ ಸ್ಕಿಡ್ ಆಗಿತ್ತು.
ಸವಾರ ರಾಜೇಶ್ ಗಾಯಗೊಂಡಿದ್ದರಲ್ಲದೆ ಸಹಸವಾರ ಮಂಜು ತೀವ್ರವಾಗಿ ಗಾಯಗೊಂಡು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮಂಜು ಮಂಗಳವಾರ ಮೃತಪಟ್ಟರು. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.