ಕುಕ್ಕುಜಡ್ಕ: ಯುವಕನ ಅಸಹಜ ಸಾವು
Update: 2016-06-04 23:40 IST
ಸುಳ್ಯ, ಜೂ.4: ಅಮರಮುಡ್ನೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಶನಿವಾರ ಪತ್ತೆಯಾಗಿದ್ದು, ಘಟನೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಅಮರಮುಡ್ನೂರು ಗ್ರಾಮದ ಪದವು ರಘುರಾಮ ಪಾಟಾಳಿಯ ಪುತ್ರ,ಜಯರಾಜ್ (26)ರ ಮೃತದೇಹ ಕುಕ್ಕುಜಡ್ಕದ ಬಳಿಯ ಚೆನ್ನಬರಿ ರಸ್ತೆಯ ಸಮೀಪ 10 ಮೀಟರ್ ದೂರದಲ್ಲಿ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಕೈಯನ್ನು ಬಟ್ಟೆಯಿಂದ ಕಟ್ಟಲಾಗಿದೆ. ಇವರು ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದರು.