ಜು. 3ರಂದು ಉಚಿತ ಮಧುಮೇಹ ತಪಾಸಣೆ

Update: 2016-06-07 14:05 GMT

ಮಂಗಳೂರು, ಜೂ. 7: ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ಗಂಜೀಮಠ ಹಾಗೂ ಕಲಾವರ್ಧಕ ಯುವಕ ಮಂಡಲ ನಾರಳ-ಸಂಕೇತ ಇದರ ಜಂಟಿ ಆಶ್ರಯದಲ್ಲಿ ಮೊಗರು ಕುಕ್ಕಟ್ಟೆ ಶಾಲಾ ಸಭಾಭವನದಲ್ಲಿ ಜುಲೈ 3ರಂದು ಉಚಿತ ಮಧುಮೇಹ ತಪಾಸಣಾ ಶಿಬಿರ ಹಾಗೂ ಉಚಿತ ಆರೋಗ್ಯ ಶಿಬಿರ ನಡೆಯಲಿದೆ.

ಶಿಬಿರದಲ್ಲಿ ಮಧುಮೇಹ ತಪಾಸಣೆ, ಮಧುಮೇಹ ಬಾರದಂತೆ ತಡೆಗಟ್ಟುವ ಕುರಿತು ಮಾಹಿತಿ ಕಾರ್ಯಾಗಾರ, ಜಾಗೃತಿ ಅಭಿಯಾನಗಳು ನಡೆಯಲಿವೆ.

ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಡಾ.ಸತೀಶ್ ಶಂಕರ್ ಬಿ. 9482167168 ಅಥವಾ ಚಂದ್ರಹಾಸ್ 9448572007 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News