ಬೆಳ್ತಂಗಡಿ: ಮಹಿಳೆಗೆ ಜೀವಬೆದರಿಕೆ: ದೂರು

Update: 2016-06-08 15:35 GMT

ಬೆಳ್ತಂಗಡಿ, ಜೂ.8: ಜಾತಿನಿಂದನೆಗೈದು ಮಹಿಳೆಯೋರ್ವರಿಗೆ ಜೀವಬೆದರಿಕೆಯೊಡ್ಡಿರುವ ಘಟನೆ ಬೆಳ್ತಂಗಡಿ ಕಸಬಾದ ಕರಳಕೋಡಿ ಎಂಬಲ್ಲಿ ನಡೆದಿದೆ.

ಕಸಬಾದ ಆಶ್ರಯ ಕಾಲನಿ ಮನೆಯ ಕೃಷ್ಣಪ್ಪಪೂಜಾರಿ, ಕೆರಳಕೋಡಿ ಮನೆಯ ಸೀತಾರಾಮ ಹಾಗೂ ಕರುಣಾಕರ ಎಂಬುವರು ಕೆರಳಕೋಡಿ ಮನೆಯ ಅನಿಲ್ ಎಂಬುವರ ಪತ್ನಿ ಪದ್ಮಾವತಿ ಎಂಬುವರ ಅಂಗಳಕ್ಕೆ ಬಂದು ಮನೆಯ ಮುಂದಿರುವ ಬೆಳೆಸಿದ ಗಿಡಗಳ ಸೊಪ್ಪನ್ನು ಕಡಿಯಲು ಪ್ರಾರಂಭಿಸಿದಾಗ ವಿರೋಧಿಸಿದ್ದಾರೆ.

ಇದನ್ನು ಪದ್ಮವಾತಿ ಆಕ್ಷೆಪಿಸಿದಾಗ ಹಲ್ಲೆ ಮಾಡಲು ಮುಂದಾಗಿದ್ದಾರಲ್ಲದೆ ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಅನಿಲ್ ಅವರಿಗೂ ಜೀವ ಬೆದರಿಕೆ ಒಡ್ಡಿದಾರೆಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News