×
Ad

ಎನ್‌ಐಟಿಕೆ: ಭ್ರಷ್ಟಾಚಾರ ಪ್ರಕರಣಕ್ಕೆ ಸಿಬಿಐ ತೆರೆ

Update: 2016-06-08 23:54 IST

ಮಂಗಳೂರು, ಜೂ.8: ಎನ್‌ಐಟಿಕೆ-ಸುರತ್ಕಲ್‌ನಲ್ಲಿ ಮೆಗಾ ಹಾಸ್ಟೆಲ್ ಕಟ್ಟಡದ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬೆಂಗಳೂರಿನ ಸಿಬಿಐ, ಎಸಿಬಿ ಮುಕ್ತಾಯಗೊಳಿಸಿದೆ.
ಎನ್‌ಐಟಿಕೆಯ ಮಾಜಿ ಪ್ರೊೆಸರ್ ಡಾ.ಆರ್.ಜೆ.ಡಿಸೋಜ ಈ ಬಗ್ಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಬಿಐ, ಎಸಿಬಿ ಆರೋಪದಲ್ಲಿ ಯಾವುದೇ ಹುರುಳಿಲ್ಲದ ಹಿನ್ನೆಲೆಯಲ್ಲಿ ಪ್ರಕರಣವನ್ನು ಬರ್ಕಾಸ್ತುಗೊಳಿಸಿದೆ ಎಂದು ಎನ್‌ಐಟಿಕೆಯ ಕುಲಸಚಿವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News