ಮಂಜೇಶ್ವರ: ಮರಳು ಸಾಗಾಟ; ವಾಹನ ವಶಕ್ಕೆ
Update: 2016-06-10 20:09 IST
ಮಂಜೇಶ್ವರ, ಜೂ.10: ಕುಂಜತ್ತೂರಿನಿಂದ ಮರಳು ಸಾಗಿಸುತ್ತಿದ್ದ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡು, ಈ ಸಂಬಂಧ ಚಾಲಕ ಕರ್ನಾಟಕದ ನಾಟೆಕಲ್ಲು ನಿವಾಸಿ ಅಶ್ರಫ್ನನ್ನು ಬಂಧಿಸಿದ್ದಾರೆ.
ಅಯ್ಯರ್ಕಟ್ಟೆಯಿಂದ ಮರಳು ತುಂಬಿದ ಓಮ್ನಿ ವ್ಯಾನ್ನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ.