ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣದ ಇನ್ನೋರ್ವ ಆರೋಪಿ ಬಂಧನ
Update: 2016-06-12 12:38 IST
ಕಾಸರಗೋಡು: ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕ್ ನಿಂದ ನಾಲ್ಕು ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇನ್ನೋರ್ವ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ನಾಯಮ್ಮರಮೂಲೆ ಶಾಖೆಯ ಅಪ್ರೈಸರ್ , ನೀಲೆಶ್ವರದ ಟಿ. ವಿ ಸತೀಶ್ ( ೪೦) ಎಂದು ಗುರುತಿಸಲಾಗಿದೆ. ಇದರಿಂದ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಐದಕ್ಕೇರಿದೆ. ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಪ್ರಮುಖ ಆರೋಪಿ ಕುಂಟಾರಿನ ಯು . ಕೆ ಹಾರಿಸ್ ,ವಿದ್ಯಾನಗರ ಶಾಖೆಯ ಅಪ್ರೈಸರ್ ಟಿ. ವಿ ಸತ್ಯಪಾಲನ್, ಚೆಂಗಳ ಸಿಟಿಜನ್ ನಗರದ ಕೆ . ಎ ಅಬ್ದುಲ್ ಮಜೀದ್ , ಜಯರಾಜನ್ ರನ್ನು ಈಗಾಗಲೇ ಬಂಧಿಸಲಾಗಿದೆ.
ಹಾರಿಸ್ , ಸತೀಶ್ ಮತ್ತು ತಲೆಮರೆಸಿಕೊಂಡಿರುವ ಬ್ಯಾಂಕ್ ಮೇನೇಜರ್ ಸಂತೋಷ್ ಕುಮಾರ್ ವಂಚನೆ ಜಾಲದ ಸೂತ್ರದಾರರು ಎಂದು ತನಿಖಾ ತಂಡ ತಿಳಿಸಿದೆ.