×
Ad

ಮಂಗಳೂರು: ಬಸ್ಸಿಗೆ ಢಿಕ್ಕಿ - ಬೈಕ್ ಸವಾರ ಮೃತ್ಯು

Update: 2016-06-12 20:27 IST

ಮಂಗಳೂರು, ಜೂ. 11: ಬೈಕ್‌ವೊಂದು ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಮೂಡುಶೆಡ್ಡೆಯ ಭಜನಾ ಮಂದಿರದ ಬಳಿ ನಡೆದಿದೆ.

ಮೃತನನ್ನು ಸರಿಪಳ್ಳ ನಿವಾಸಿ ಅಜಿತ್ (19) ಎಂದು ಗುರುತಿಸಲಾಗಿದೆ. ಇವರು ಮೂಡುಶೆಡ್ಡೆಯಿಂದ ವಾಮಂಜೂರು ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಪಿಲುಕುಳದ ಕಡೆಗೆ ಹೋಗುತ್ತಿದ್ದ ಬಸ್ಸಿಗೆ ಇವರ ಬೈಕ್ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಢಿಕ್ಕಿಯಿಂದ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News