ದಿಲ್ಲಿ ಸಾರಿಗೆ ಸಚಿವ ಗೋಪಾಲ್‌ ರೈ ರಾಜೀನಾಮೆ

Update: 2016-06-14 09:24 GMT


ಹೊಸದಿಲ್ಲಿ, ಜೂ.14: ದಿಲ್ಲಿ ಸರಕಾರದ ಸಾರಿಗೆ ಇಲಾಖೆಯಲ್ಲಿ ಅವ್ಯವಹಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ಗೋಪಾಲ್‌ ರೈ ಅವರು ಅನಾರೋಗ್ಯದ ಕಾರಣ ನೀಡಿ  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತೆರವಾಗಿರುವ ಸಾರಿಗೆ ಸಚಿವಾಲಯದ ಹೊಣೆಯನ್ನು ಲೋಕೋಪಯೋಗಿ ಮತ್ತು ಆರೋಗ್ಯ ಸಚಿವ ಸತ್ತೇಂದ್ರ ಜೈನ್  ಅವರಿಗೆ ವಹಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ
ಕಳೆದ ವಾರ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ಮನವಿ ಸಲ್ಲಿಸಿ ಸಾರಿಗೆ ಸಚಿವ ಸ್ಥಾನದಿಂದ ತಮ್ಮನ್ನು ತೆರವುಗೊಳಿಸುವಂತೆ ವಿನಂತಿಸಿದ್ದರು.  ಗೋಪಾಲ ರೈ   ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News