ಅಡ್ಡೂರ್: ಬಡ ಕುಟುಂಬಗಳಿಗೆ ರಮಝಾನ್ ಕಿಟ್ ವಿತರಣೆ

Update: 2016-06-15 11:10 GMT

ಮಂಗಳೂರು, ಜೂ. 14: ಶಂಸುಲ್ ಉಲಮಾ ಕ್ರಿಯಾ ಸಮಿತಿ (ಟಿಬೆಟ್ ಘಟಕ) ಅಡ್ಡೂರ್ ವತಿಯಿಂದ ಇತ್ತೀಚೆಗೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಬಡ ಕುಟುಂಬಗಳಿಗೆ ರಮಝಾನ್ ಕಿಟ್ ವಿತರಿಸಲಾಯಿತು.

ಬದ್ರಿಯಾ ಜುಮಾ ಮಸೀದಿಯ ಮುದರ್ರಿಸ್ ಮುಹಮ್ಮದ್ ಶರೀಫ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಮಸೀದಿಯ ಗೌರವಾಧ್ಯಕ್ಷ ಹಾಜಿ ಎ.ಎಸ್.ಬಾವುಂಞಿ ರಮಝಾನ್ ಕಿಟ್ ವಿತರಿಸಿದರು. ಮಸೀದಿಯ ಅಧ್ಯಕ್ಷ ಟಿ.ಸೈಯದ್, ಡಾ.ಸಿದ್ದೀಕ್ ಅಡ್ಡೂರು, ಶಂಸುಲ್ ಉಲಮಾ ಕ್ರಿಯಾ ಸಮಿತಿಯ ಅಧ್ಯಕ್ಷ ಅಬ್ದುಲ್ ಬಶೀರ್, ಉಪಾಧ್ಯಕ್ಷ ಅಹ್ಮದ್ ಬಾವ, ಕಾರ್ಯದರ್ಶಿ ಸದಖತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದಾವೂದ್ ಹನೀಫಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News