ಉಡುಪಿ: ರಿವಾಲ್ವರ್ ಸಹಿತ ರೌಡಿಯ ಬಂಧನ

Update: 2016-06-22 17:55 GMT

ಉಡುಪಿ, ಜೂ.22: ಉಡುಪಿ ಭುಜಂಗ ಪಾರ್ಕ್ ಬಳಿ ಜೂ.22ರಂದು ರಿವಾಲ್ವರ್ ಹಿಡಿದುಕೊಂಡು ತಿರುಗಾಡುತ್ತಿದ್ದ ಉಡುಪಿ ಬೈಲಕೆರೆಯ ರಾಘ ವೇಂದ್ರ ಕಾಂಚನ್(30) ಎಂಬಾತನನ್ನು ಉಡುಪಿ ಡಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಉಡುಪಿ ಡಿಸಿಬಿ ವಿಭಾಗದ ಪೊಲೀಸ್ ನಿರೀಕ್ಷಕ ರತ್ನಕುಮಾರ್ ನೇತೃತ್ವದ ತಂಡ ರಾಘವೇಂದ್ರ ಕಾಂಚನ್ ನನ್ನು ಬಂಧಿಸಿ, ಒಂದು ಪಿಸ್ತೂಲ್, 6 ಸಜೀವ ಗುಂಡು(ರೌಂಡ್ಸ್)ಗಳನ್ನು ವಶಪಡಿಸಿಕೊಂಡಿದೆ. ಈ ಸೊತ್ತುಗಳ ಒಟ್ಟು ಮೌಲ್ಯ 75,000ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ಹಾಗೂ ಪಿಸ್ತೂಲನ್ನು ಉಡುಪಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಅಣ್ಣಾಮಲೈ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಮತ್ತು ಉಡುಪಿ ಡಿವೈಎಸ್ಪಿ ಎಸ್.ಜೆ.ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಉಡುಪಿ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದ ಪೊಲೀಸ್ ನಿರೀಕ್ಷಕ ಟಿ.ಆರ್.ಜೈಶಂಕರ್ ಮತ್ತು ಸಿಬ್ಬಂದಿಗಳಾದ ಎಎಸ್‌ಐ ರೋಸಾರಿಯೋ ಡಿಸೋಜ, ರವಿಚಂದ್ರ, ಸುರೇಶ, ಚಂದ್ರ ಶೆಟ್ಟಿ, ರಾಮು ಹೆಗ್ಡೆ, ರಾಘವೇಂದ್ರ, ಪ್ರವೀಣ, ರಾಜ್‌ಕುಮಾರ್, ಶಿವಾನಂದ, ದಯಾನಂದ ಮತ್ತು ವಾಹನ ಚಾಲಕ ರಾಘವೇಂದ್ರ, ನವೀನಚಂದ್ರ ಈ ಕಾರ್ಯಾಚರಣೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News