×
Ad

ಉಡುಪಿ: ಮಸೀದಿ, ಚರ್ಚ್‌ಗಳಲ್ಲಿ ಸಚಿವ ಪ್ರಮೋದ್‌ಗೆ ಸನ್ಮಾನ

Update: 2016-06-24 19:48 IST

ಉಡುಪಿ, ಜೂ.24: ಉಡುಪಿ ಜಾಮಿಯ ಮಸೀದಿಗೆ ಗುರುವಾರ ಭೇಟಿ ನೀಡಿದ ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಮಸೀದಿ ವತಿಯಿಂದ ಸನ್ಮಾನಿಸಿ ಕುರ್ ಆನ್ ಕನ್ನಡ ಅನುವಾದ ಗ್ರಂಥವನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಮಸೀದಿಯ ಇಮಾಮ್ ರಶೀದ್ ಅಹ್ಮದ್ ನದ್ವಿ, ಮಸೀದಿ ಅಧ್ಯಕ್ಷ ಸೈಯದ್ ಯಾಸೀನ್, ಕಾರ್ಯದರ್ಶಿ ಖಲೀಲ್ ಅಹ್ಮದ್, ಸದಸ್ಯರಾದ ಮುಹಮ್ಮದ್ ವೌಲಾ, ಮುನೀರ್, ಬುಡಾನ್ ಬಾಷಾ, ಕರಮತ್ ಅಲಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಅಮೃತ್ ಶೆಣೈ, ಜನಾರ್ದನ ಭಂಡಾರ್ಕರ್ ಮೊದಲಾದವರು ಉಪಸ್ಥಿತರಿದ್ದರು.

ಚರ್ಚ್‌ಗೆ ಭೇಟಿ:

ಬಳಿಕ ಉಡುಪಿ ಶೋಕಾ ಮಾತಾ ಚರ್ಚ್‌ಗೆ ಭೇಟಿ ನೀಡಿದ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ.ಫ್ರೆಡ್ ಮಸ್ಕರೇನಸ್, ಫಾ.ಕ್ಲೆಮೆಂಟ್, ಫಾ.ಲಾರೆನ್ಸ್, ಫಾ.ರಾಯಿಸ್ಟನ್, ಫಾ.ಡೆನ್ನಿಸ್ ಡೇಸಾ, ಅಲ್ಫೋನ್ಸ್ ಡಿಕೋಸ್ತ, ಲೂವಿಸ್ ಲೊಬೊ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News