ಕಾಸರಗೋಡು: ಪಿಲಿಕ್ಕೋಡು ಬ್ಯಾಂಕ್ ಮ್ಯಾನೇಜರ್ ಸ್ನೇಹಿತನ ಬಂಧನ
ಕಾಸರಗೋಡು, ಜೂ.25: ಪಿಲಿಕ್ಕೋಡು ಸೇವಾ ಸಹಕಾರಿ ಬ್ಯಾ೦ಕ್ ನಲ್ಲಿ ನಡೆದ ನಕಲಿ ಚಿನ್ನಾಭರಣ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಬ್ಯಾ೦ಕ್ ಮೆನೇಜರ್ ನ ಸ್ನೇಹಿತನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೊಡೋತ್ ಪಿಲಿಕ್ಕೋಡ್ ರೈಲ್ವೆ ಮೇಲ್ಸೇತುವೆ ಸಮೀಪದ ಸಿ .ಸುಭಾಷ್( ೪೦) ಎಂದು ಗುರುತಿಸಲಾಗಿದೆ.
ಈ ನಡುವೆ ನಕಲಿ ಚಿನ್ನಾಭರಣ ಅಡವಿಟ್ಟು ೮೦.೪೮ ಲಕ್ಷ ರೂ. ಸಾಲ ಪಡೆದು ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾದ ಬ್ಯಾ೦ಕ್ ಮೆನೇಜರ್ ಎಂ . ವಿ ಶರತ್ ಚಂದ್ರನ್ , ಅಪ್ರೈಸರ್ ಪಿ . ವಿ ಕು೦ಞರಾಮನ್ ರನ್ನು ಬ್ಯಾ೦ಕ್ ಗೆ ತಲುಪಿಸಿ ತನಿಖಾ ತಂಡ ಮಾಹಿತಿ ಕಲೆಹಾಕಿತು.
ಕಾಞ೦ಗಾಡ್ ನ ಜುವೆಲ್ಲರಿಯೊಂದರಿಂದ ಖರೀದಿಸಿದ್ದಾಗಿ ಬಂಧಿತ ಸುಭಾಷ್ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.ಪಿಲಿಕ್ಕೋಡು ಬ್ಯಾ೦ಕ್ ನಲ್ಲಿ ನಡೆದ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾದವರ ಸಂಖ್ಯೆ ಮೂರಕ್ಕೇರಿದೆ. ಸುಭಾಷ್ ಐದು ಬಾರಿ ಈತ ನಕಲಿ ಚಿನ್ನಾಭರಣ ಅಡವಿಟ್ಟು ಈ ವಂಚನೆ ನಡೆಸಿದ್ದನು. ಬ್ಯಾ೦ಕ್ ಮೆನೇಜರ್ ರ ಅರಿವಿನಿಂದಲೇ ಈ ವಂಚನೆ ನಡೆಸಿದ್ದನು ಎಂದು ತನಿಖೆ ಯಿಂದ ತಿಳಿದುಬಂದಿದೆ. ಹಲವಾರು ಮಂದಿ ಈ ವಂಚನೆ ಯಲ್ಲಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಹಲವು ಸಹಕಾರಿ ಬ್ಯಾ೦ಕ್ ಗಳಲ್ಲಿ ವಂಚೆನೆ ನಡೆದಿದ್ದು, ಬೆಳಕಿಗೆ ಬಂದ ನಾಲ್ಕು ಬ್ಯಾ೦ಕ್ ಗಳ ವಂಚನೆ ಪ್ರಕರಣಗಳಲ್ಲಿ ಬಂಧಿತರಾದವರ ಸಂಖ್ಯೆ ೯ ಕ್ಕೇರಿದೆ. ಸುಮಾರು ಎಂಟು ಲಕ್ಷ ರೂ. ಗಳ ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿದೆ