ಉತ್ತರಖಂಡ್ ನಲ್ಲಿ ಮಳೆಯಿಂದಾಗಿ 9 ಸಾವು, ಹಲವರು ನಾಪತ್ತೆ
Update: 2016-07-01 16:00 IST
ಡೆಹಾಡ್ರೂನ್, ಜು.01: ಉತ್ತರಖಂಡ್ನ ಪಿಥೋರ್ಗಡ ಮತ್ತು ಚಾಮೊಲಿ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಒಂಭತ್ತು ಮಂದಿ ಮೃತಪಟ್ಟಿದ್ದಾರೆ, ಹಲವು ಮಂದಿ ನಾಪತ್ತೆಯಾಗಿದ್ದಾರೆ.
ಮೃತಪಟ್ಟವರ ಕುಟುಂಬಕ್ಕೆ ಮುಖ್ಯ ಮಂತ್ರಿ ಹರೀಶ್ ರಾವತ್ ಎರಡು ಲಕ್ಷ ರೂ. ನಗದು ಘೋಷಿಸಿದ್ದಾರೆ.
ಮಳೆ ಹಾಗೂ ಭೂ ಕುಸಿತದಿಂದಾಗಿ ಪಿಥೋರ್ಗಡ ಜಿಲ್ಲೆಯಲ್ಲಿ 160 ಕುಟುಂಬಗಳು ತೊಂದರೆಗೊಳಗಾಗಿದೆ. ಮೂವತ್ತು ಮಂದಿ ಕಾಣೆಯಾಗಿದ್ದಾರೆ.