ವೆಲೆನ್ಸಿಯಾ: ವಿದ್ಯುತ್ ತಂತಿಯ ಮೇಲೆ ಉರುಳಿದ ಮರದ ಕೊಂಬೆ

Update: 2016-07-10 14:46 GMT

ಮಂಗಳೂರು, ಜು.10:ನಗರದ ವೆಲೆನ್ಸಿಯಾ ವೃತ್ತದ ಪಾರ್ಕ್ ಬಳಿ ಇರುವ ಮರದ ಕೊಂಬೆಯೊಂದು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದು ಕೆಲ ಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.

    ವೆಲೆನ್ಸಿಯಾ ವೃತ್ತದ ಬಳಿ ರಿಕ್ಷಾ ಪಾರ್ಕಿಂಗ್‌ನಲ್ಲಿ ರಿಕ್ಷಾಗಳ ನಿಂತಿದ್ದ ಸಂದರ್ಭದಲ್ಲಿ ಮರದ ಗೆಲ್ಲು ತಂತಿಯ ಆಧಾರದಲ್ಲಿ ನೇತಾಡಿಕೊಂಡಿದ್ದ ಕಾರಣ,ಮತ್ತು ವಿದ್ಯುತ್ ಸಂಪರ್ಕ ತಕ್ಷಣ ಸ್ಥಗಿತಗೊಂಡ ಪರಿಣಾಮವಾಗಿ ಯಾವೂದೆ ಹೆಚ್ಚಿನ ಅಪಾಯ ಉಂಟಾಗಲಿಲ್ಲ.ಈ ಸಂದರ್ಭದಲ್ಲಿ ಅಲ್ಲಿದ್ದ ಸಾರ್ವಜನಿಕರು ಮೆಸ್ಕಾಂ ಇಲಾಖೆಗೆ ದೂರು ನೀಡಿದ ಬಳಿಕ ಮೆಸ್ಕಾಂ ಸಿಬ್ಬಂದಿಗಳು ಹಾಗೂ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿಗಳು ತುರ್ತು ಕಾರ್ಯಾಚರಣೆ ನಡೆಸಿ ಮರದ ಗೆಲ್ಲನ್ನು ಬೇರ್ಪಡಿಸಿ ವಿದ್ಯುತ್ ಸಂಚಾರಕ್ಕೆ ಉಂಟಾಗಿದ್ದ ಅಡಚಣೆಯನ್ನು ನಿವಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News