ಬಂಟ್ವಾಳ: ಜುಗಾರಿ ಅಡ್ಡೆಗೆ ದಾಳಿ - ಐವರ ಬಂಧನ

Update: 2016-07-10 15:11 GMT

ಬಂಟ್ವಾಳ, ಜು. 10: ವಿಟ್ಲ ಪೇಟೆಯ ಅಡ್ಡದ ಬೀದಿಯಲ್ಲಿ ಜುಗಾರಿ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ವಿಟ್ಲ ಉಪನಿರೀಕ್ಷ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿ ತಂಡ ರವಿವಾರ ದಾಳಿ ನಡೆಸಿ 5 ಮಂದಿಆರೋಪಿಗಳನ್ನು ಬಂಧಿಸಿ 1,040 ರೂ. ವಶಕ್ಕೆ ಪಡೆದ ಘಟನೆ ನಡೆದಿದೆ.

ಕುಡ್ತಮುಗೇರು ನಿವಾಸಿ ಲೋಕೇಶ್(38), ಕಂಡಿಗೆ ನಿವಾಸಿ ಕೊರಗಪ್ಪ ಗೌಡ(35), ಕೇಪು ನಿವಾಸಿ ರುಕ್ಮಯ ಯಾನೆ ತಮ್ಮು(38), ದೇವಸ್ಯ ನಿವಾಸಿ ಮನೋಜ್(26), ಬದನಾಜೆ ನಿವಾಜಿ ನಾಗೇಶ್(39) ಬಂಧಿತರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆದ ಸಮಯ ಇವರು ಸಿಕ್ಕಿ ಬಿದ್ದಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News