×
Ad

ಮಂಗಳೂರು ದಕ್ಷಿಣ ಉಪವಿಭಾಗಕ್ಕೆ ನೂತನ ಎಸಿಪಿಯಾಗಿ ಶೃತಿ ಎನ್.ಎಸ್.

Update: 2016-07-12 17:03 IST

ಉಳ್ಳಾಲ, ಜು.12: ಮಂಗಳೂರು ಉಪವಿಭಾಗದ ನೂತನ ಎಸಿಪಿಯಾಗಿ ಶೃತಿ ಎನ್.ಎಸ್. ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ಮಡಿಕೇರಿ ಮೂಲದವರಾದ ಶೃತಿ, ಈ ಹಿಂದೆ ಶಿವಮೊಗ್ಗದ ಶಿಕಾರಿಪುರದಲ್ಲಿ ದಕ್ಷ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದು ಮಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.

ಯುವ ಅಧಿಕಾರಿಯಾಗಿರುವ ಶೃತಿ ಅವರು ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಮುಗಿಸಿದ್ದು ಜಿಲ್ಲೆಯ ನಂಟು ಹೊಂದಿದ್ದಾರೆ.

ದಕ್ಷಿಣ ಉಪವಿಭಾಗದ ಅಧೀನಕ್ಕೆ ಬರುವ ಪಾಂಡೇಶ್ವರ, ಮಂಗಳೂರು ಗ್ರಾಮಾಂತರ, ಕೊಣಾಜೆ, ಉಳ್ಳಾಲ ಪೊಲೀಸ್ ಠಾಣೆಗೆ ಎಸಿಪಿಯಾಗಿ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News