ಜೆಸಿಐ ಬೆಳ್ತಂಗಡಿಗೆ 5 ಪುರಸ್ಕಾರಗಳು

Update: 2016-07-13 13:53 GMT

ಬೆಳ್ತಂಗಡಿ, ಜು.13: ಮುಂಡ್ಕೂರಿನ ನಾನಾ ಪಾಟೇಕರ್ ಸಭಾಂಗಣದಲ್ಲಿ ಜೆಸಿಐ ಮುಂಡ್ಕೂರು ಭಾರ್ಗವದ ಆತಿಥ್ಯದಲ್ಲಿ ಜರಗಿದ ಜೆಸಿಐ ಇಂಡಿಯಾದ ವಲಯ 15ರ ಜೆಜೆಸಿ, ಜೆಸಿರೆಟ್ ರಜತ ಸಂಗಮ ಸಮಾವೇಶದಲ್ಲಿ ಜೆಸಿಐ ಬೆಳ್ತಂಗಡಿಗೆ 5 ಪುರಸ್ಕಾರಗಳು ಲಭಿಸಿವೆ.

ಜೆಸಿರೆಟ್ ವಿಭಾಗದ ಎಕ್ಸಲೆಂಟ್ ಅವಾರ್ಡ್, ಜೆಜೆಸಿ ವಿಭಾಗದ ಅತುತ್ತಮ ದ್ವಿತೀಯ ಘಟಕಾಧ್ಯಕ್ಷ ಸಹಿತ ಹಲವು ಮನ್ನಣೆಗಳು ಲಭಿಸಿದವು. ಬೆಳ್ತಂಗಡಿ ಜೆಸಿಐ ಅಧ್ಯಕ್ಷ ವಸಂತ ಶೆಟ್ಟಿ ವಲಯಾಧ್ಯಕ್ಷ ಸಂದೀಪ್ ಕುಮಾರ್‌ರಿಂದ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವಲಯ ಕಾರ್ಯಕ್ರಮ ನಿರ್ದೇಶಕ ಚಿದಾನಂದ ಇಡ್ಯಾ, ಜೆಜೆಸಿ ಸಂಯೋಜಕ ರಾಧಾಕೃಷ್ಣ ಬಂಟ್ವಾಳ, ಜೆಸಿರೆಟ್ ಸಂಯೋಜಕಿ ಚೇತನಾ ದತ್ತಾತ್ರೇಯ, ವಲಯ ಉಪಾಧ್ಯಕ್ಷ ಪ್ರಶಾಂತ್ ರೈ ಸೇರಿದಂತೆ ವಲಯಾಡಳಿತ ಮಂಡಳಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೆಜೆಸಿ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಬೆಳ್ತಂಗಡಿ ಜೆಜೆಸಿ ಘಟಕಾಧ್ಯಕ್ಷ ಪಡೆದರು. ಘಟಕಾಧ್ಯಕ್ಷರ ಜತೆ ಜೆಜೆಸಿ ಅಧ್ಯಕ್ಷ ಸ್ಮಿತೇಶ್ ಬಾರ್ಯ, ಜೆಸಿ ಸ್ವಾತಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News