ಕೆರಿಬಿಯನ್ ನಾಡಿನಲ್ಲಿ ಕ್ಯಾಮರಾದಲ್ಲೂ ಕುಂಬ್ಳೆ ಕೈಚಳಕ

Update: 2016-07-13 15:45 GMT

ಸೈಂಟ್ ನೆವಿಸ್, ಜು.13: ಭಾರತದ ಮಾಜಿ ನಾಯಕ ಹಾಗೂ ನೂತನ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಭಾರತ ಕಂಡ ಶ್ರೇಷ್ಠ ಲೆಗ್ ಸ್ಪಿನ್ನರ್ ಮಾತ್ರವಲ್ಲ, ಛಾಯಾಗ್ರಾಹಕರಾಗಿಯೂ ಅಷ್ಟೇ ಪ್ರಸಿದ್ಧರಾಗಿದ್ದಾರೆ.

ಇತ್ತೀಚೆಗಷ್ಟೇ ಭಾರತದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ಕುಂಬ್ಳೆ ಉತ್ತಮ ವನ್ಯಜೀವಿ ಛಾಯಾಗ್ರಾಹಕರಾಗಿದ್ದಾರೆ. ಪ್ರಸ್ತುತ ಭಾರತ ಕ್ರಿಕೆಟ್ ತಂಡದೊಂದಿಗೆ ವೆಸ್ಟ್‌ಇಂಡೀಸ್ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲು ಕೆರಿಬಿಯನ್ ನಾಡಿಗೆ ಪ್ರವಾಸ ಕೈಗೊಂಡಿರುವ ಕುಂಬ್ಳೆ ತನ್ನ ಕ್ಯಾಮರಾದ ಮೂಲಕ ಮತ್ತೊಮ್ಮೆ ಕೈಚಳಕ ತೋರಿದ್ದಾರೆ.

ಕೆರಿಬಿಯನ್ ನಾಡಿನ ರುದ್ರರಮಣೀಯ ಬೀಚ್‌ಗಳಲ್ಲಿ ಸಮಯ ಕಳೆದಿರುವ ಟೀಮ್ ಇಂಡಿಯಾದ ಸದಸ್ಯರ ಫೋಟೊಗಳನ್ನು ಕುಂಬ್ಳೆ ತನ್ನ ಕ್ಯಾಮರಾಕಣ್ಣಲ್ಲಿ ಸೆರೆ ಹಿಡಿದಿದ್ದಾರೆ. ಕುಂಬ್ಳೆಯ ಕ್ಯಾಮರಾದಲ್ಲಿ ಅದ್ಭುತ ಕ್ಷಣಗಳು ಸೆರೆಯಾಗಿವೆ.

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ನೀರಿಗೆ ಧುಮುಕುತ್ತಿರುವ ದೃಶ್ಯವನ್ನು ಕುಂಬ್ಳೆ ಆಕರ್ಷಕವಾಗಿ ಸೆರೆ ಹಿಡಿದಿದ್ದು ಈ ಪೋಟೊಗಳನ್ನು ಬಿಸಿಸಿಐನ ಅಧಿಕೃತ ಟ್ವಿಟ್ಟರ್‌ನಲ್ಲಿ ಹಾಕಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News