×
Ad

‘ದೇವಳಕ್ಕಿಂತ ಸಮುದಾಯದ ಶಿಕ್ಷಣಕ್ಕೆ ಹಣ ವ್ಯಯಿಸಿ’

Update: 2016-07-18 00:13 IST

ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ
ಉಡುಪಿ, ಜು.17: ದೇವಸ್ಥಾನಗಳಿಗಿಂತ ಸಮುದಾಯದ ಶಿಕ್ಷಣಕ್ಕೆ ಬಹು ಪಾಲು ಹಣವನ್ನು ನಾವು ವ್ಯಯ ಮಾಡ ಬೇಕಾಗಿದೆ. ಇದುವೇ ದೇವರ ದೊಡ್ಡ ಕೆಲಸವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಸಂಸದ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಉಡುಪಿ ದೇವಾಡಿಗರ ಸೇವಾ ಸಂಘದ ಆಶ್ರಯದಲ್ಲಿ ಮುಂಬೈಯ ದೇವಾಡಿಗ ಸಂಘ, ಶ್ರೀಸತ್ಯನಾರಾಯಣ ಇಂಡಸ್ಟ್ರೀಯಲ್ ಸಪ್ಲಾಯರ್ಸ್, ದುಬೈ ಮತ್ತು ಶಾರ್ಜಾದ ಎಲಿಗೆಂಟ್ ಸಮೂಹ ಸಂಸ್ಥೆಗಳು, ಚಿಟ್ಪಾಡಿ ಶ್ರೀಏಕನಾಥೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈ ಟಿಯ ಸಹಭಾಗಿತ್ವದಲ್ಲಿ ರವಿವಾರ ಚಿತ್ಪಾಡಿ ದೇವಾಡಿಗರ ಸಭಾಭವನದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತ ನಾಡಿ, ಬೇರೆ ದೇಶಗಳಲ್ಲಿ ವೃದ್ಧರ ಸಂಖ್ಯೆ ಶೇ.70ಕ್ಕಿಂತ ಹೆಚ್ಚಿದ್ದರೆ ಭಾರತದಲ್ಲಿ 40 ವರ್ಷದೊಳಗಿನ ಯುವಕರ ಸಂಖ್ಯೆ ಶೇ.70ರಷ್ಟಿದೆ. ಆದುದರಿಂದ ಮುಂದೆ ಜಗತ್ತಿನಲ್ಲಿ ಎದು ರಾಗಲಿರುವ ಯುವಕರ ಕೊರತೆ ಯನ್ನು ಭಾರತ ತುಂಬುವ ಕೆಲಸ ಮಾಡಲಿದೆ ಎಂದರು.
ಉಡುಪಿ ದೇವಾಡಿಗರ ಸೇವಾ ಸಂಘದ ಅಧ್ಯಕ್ಷ ಕೆ.ಸೀತಾರಾಮ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯವಾದಿ ವನಿತಾ ದೇವಾಡಿಗ, ಪಿಎಚ್‌ಡಿ ಪದವಿ ಪುರಸ್ಕೃತ ಡಾ.ದೀಪಾ ಪ್ರಭಾಕರ್, ಡಾ.ನಮ್ರತಾರನ್ನು ಸನ್ಮಾನಿ ಸಲಾಯಿತು. ರಾಜ್ಯಮಟ್ಟ ದಲ್ಲಿ ಶೇ.85 ಹಾಗೂ ಅಧಿಕ ಅಂಕ ಪಡೆದ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರ ಸ್ಕಾರವನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮ ಪಾಲ ಯು.ದೇವಾಡಿಗ, ಮುಂಬೈ ದೇವಾಡಿಗರ ಸಂಘದ ಅಧ್ಯಕ್ಷ ವಾಸು ದೇವಾಡಿಗ, ಎಲಿಗೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ದಿನೇಶ್‌ಚಂದ್ರ ಶೇಖರ ದೇವಾಡಿಗ, ಶ್ರೀಏಕನಾಥೇಶ್ವರಿ ದೇವಸ್ಥಾನ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್, ಸೊಸೈಟಿಯ ಅಧ್ಯಕ್ಷ ರತ್ನಾಕರ್ ಜಿ.ಎಸ್. ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಮುದಾಯದ ಪ್ರಮುಖರಾದ ಆಲೂರು ರಘುರಾಮ ದೇವಾಡಿಗ, ರವಿಶಂಕರ ಸೇರಿಗಾರ, ಚಂದ್ರಶೇಖರ ದೇವಾಡಿಗ, ರಮಾನಂದ ಸೇರಿಗಾರ, ಯೋಗೀಶ ದೇವಾಡಿಗ, ನಾರಾಯಣ ಸೇರಿಗಾರ, ಉಮೇಶ್ ದೇವಾಡಿಗ, ಕೃಷ್ಣಪ್ಪ ದೇವಾಡಿಗ, ಪ್ರಕಾಶ್ ದೇವಾಡಿಗ, ವಿನೋದ್ ದೇವಾಡಿಗ, ಸಂಜೀವ ದೇವಾಡಿಗ, ಜನಾರ್ದನ ದೇವಾಡಿಗ, ಗೋವಿಂದ ದೇವಾ ಡಿಗ, ಸುರೇಶ್ ದೇವಾಡಿಗ, ಶುಂಭು ಸೇರಿಗಾರ್, ನರಸಿಂಹ ದೇವಾಡಿಗ, ನಾಗರಾಜ ರಾಯಪ್ಪನ ಮಠ ಮೊದಲಾದವರು ಉಪ ಸ್ಥಿತರಿದ್ದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಗಣೇಶ್ ದೇವಾಡಿಗ ಸ್ವಾಗತಿಸಿದರು. ಮೋಹನ್‌ದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಶೇರಿ ಗಾರ್ ಹಾಗೂ ಶ್ಯಾಮಲಾ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.
‘ಬಾಹುಬಲಿ’ ಕುರಿತಾಗಿ ಮಹಾಕಾವ್ಯವನ್ನು ಈಗಾಗಲೇ ರಚಿಸಿದ್ದು, ಅದರ ಪರಿಷ್ಕರಣೆಗಾಗಿ ಸಂಶೋಧಕರು ಹಾಗೂ ಹಿರಿಯ ಸಾಹಿತಿಗಳಿಗೆ ಕಳುಹಿಸಿ ಕೊಟ್ಟಿದ್ದೇನೆ. ಸುಮಾರು ಒಂದು ಸಾವಿರ ಪುಟಗಳ ಈ ಮಹಾಕಾವ್ಯವನ್ನು 2018ರಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಮೊದಲು ಅಂದರೆ 2017ರ ಅಂತ್ಯಕ್ಕೆ ಬಿಡುಗಡೆಗೊಳಿಸಲು ನಿರ್ಧರಿಸಿದ್ದೇನೆ.
-ವೀರಪ್ಪ ಮೊಯ್ಲಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News