ವಿಟ್ಲ ಎಸ್ಸೈಗೆ ಶೋಕಾಸ್ ನೋಟಿಸ್

Update: 2016-07-19 18:21 GMT

ಬಂಟ್ವಾಳ, ಜು. 19: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಆದೇಶ ಪಾಲಿಸದ ವಿಟ್ಲ ಎಸ್ಸೈಗೆ ಬಂಟ್ವಾಳ ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ವಿಟ್ಲ ಪಡ್ನೂರು ಗ್ರಾಮದ ಕೋಡಪದವು ದಿವಾಣ ಎಂಬಲ್ಲಿನ ನಿವಾಸಿ ಗೌರಿ ಎಂಬವರ ಅರ್ಜಿಯೊಂದಕ್ಕೆ ಸಂಬಂಧಿಸಿ ಕಟ್ಟಡ ಕಾಮಗಾರಿ ನಿಲ್ಲಿಸಲು ವಿಟ್ಲ ಠಾಣೆಗೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ಆದೇಶ ಪಾಲಿಸಿದ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡದ ಕಾರಣ ವಿಟ್ಲ ಠಾಣೆಯ ಎಸ್ಸೈ ಪ್ರಕಾಶ್ ದೇವಾಡಿಗರಿಗೆ ಬಂಟ್ವಾಳ ನ್ಯಾಯಾಲಯ ಶೋಕಾಸ್ ನೋಟಿಸ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News