×
Ad

ನನ್ನ ಮಗನಿಗೆ ದಲಿತರ ಮೇಲೆ ಹಲ್ಲೆ ನಡೆಸುವಂತೆ ಬಲಪ್ರಯೋಗ ಮಾಡಲಾಗಿತ್ತು; ಬಂಧಿತ ಯುವಕನ ತಂದೆಯಿಂದ ಹೇಳಿಕೆ

Update: 2016-07-21 15:12 IST

ಅಹ್ಮದಾಬಾದ್, ಜು.21: ನನ್ನ ಮಗನಿಗೆ ದಲಿತರ ಮೇಲೆ ಹಲ್ಲೆ ನಡೆಸಲು  ಬಲಪ್ರಯೋಗ  ಮಾಡಲಾಗಿತ್ತು ಎಂದು  ಗುಜರಾತ್‌ನ ಗಿರ್‌ ಸೋಮನಾಥ್‌ ಜಿಲ್ಲೆಯ ಉನಾ ಪಟ್ಟಣದಲ್ಲಿ ದಲಿತ ಯುವಕರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತ 9 ಮಂದಿ  ಯುವಕರ ಪೈಕಿ  ಹದಿನೇಳರ ಹರೆಯದ ಮುಸ್ಲಿಂ  ಯುವಕನ ತಂದೆ ಆರೋಪಿಸಿದ್ದಾರೆ.
" ಮುಸ್ಲಿಂರು ಗೋರಕ್ಷಕರೊಂದಿಗೆ ಇದ್ದಾರೆ ಎನ್ನುವುದನ್ನು ತೋರಿಸಿಕೊಡುವುದಕ್ಕಾಗಿ ನನ್ನ ಮಗನನ್ನು ಬಳಸಿಕೊಂಡಿದ್ದಾರೆ ” ಎಂದು ಹೇಳಿದ್ದಾರೆ.
" ನಾನು ಮಗನನ್ನು ಬಾಳೆ ಹಣ್ಣು ತರಲು ಬಸ್‌ನಿಲ್ದಾಣದ ಪಕ್ಕದ ಅಂಗಡಿಗೆ ಕಳುಹಿಸಿದ್ದೆ. ಅಲ್ಲಿ ತಲುಪಿದಾಗ ಪ್ರಮೋದ್‌ಗಿರಿ ಗೋಸ್ವಾಮಿ ಮತ್ತು ಇತರರು ಕಾರಿನಲ್ಲಿ ಆಗಮಿಸಿದರು. ನಾಲ್ವರನ್ನು ಕಾರಿನಿಂದ ಹೊರಗೆ ಎಳೆದು ಕಾರಿಗೆ ಕಟ್ಟಿ ಹಾಕಿದರು. ನನ್ನ ಮಗ ಕುತೂಹಲದಿಂದ ಈ ಘಟನೆಯನ್ನು ನೋಡುತ್ತಿದ್ದಾಗ , ಆತನನ್ನು ಗೋ ರಕ್ಷಕ ಸಮಿತಿಯವರು ಕರೆದು ದಲಿತರ ಮೇಲೆ ಹೊಡೆಯಲು ಸೂಚಿಸಿದರು. 
ಯುವಕ ಹಿಂದೆಟು ಹಾಕಿದಾಗ ಆತನ ಕೈಗೆ ಲಾಠಿ ಕೊಟ್ಟು ಬಲವಂತವಾಗಿ ಹಲ್ಲೆ ನಡೆಸುವಂತೆ ಒತ್ತಡ ಹೇರಿದರು” ಎಂದು  ಯುವಕನ ತಂದೆ ಹೇಳಿದ್ದಾರೆ.
ಯುವಕನ ತಂದೆ ಸಾರಿಗೆ ಉದ್ಯಮ ನಡೆಸುತ್ತಿದ್ದಾರೆ. " ಅನಾರೋಗ್ಯದ ಕಾರಣಕ್ಕಾಗಿ ಮಗನ ಓದನ್ನು ಕಳೆದ ವರ್ಷ ನಿಲ್ಲಿಸಲಾಗಿತ್ತು. ಆದರೆ ಈ ವರ್ಷ ಡಿಪ್ಲೊಮಾ ಎಂಜಿನಿಯರಿಂಗ್‌ ಕೋರ್ಸ್‌‌ಗೆ ಸೇರಲು ಅರ್ಜಿ ಸಲ್ಲಿಸಲಾಗಿತ್ತು. ರೆ ಇದೀಗ ಹುಡುಗನ ಶಿಕ್ಷಣಕ್ಕೆ ಅಡ್ಡಿಯಾಗಿದೆ ” ಎಂದು ಹುಡುಗ ತಂದೆ   ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News