ಜೆಪ್ಪು ಸಂತ ಜೋಸೆಫ್ ಕಾಲೇಜಿನಲ್ಲಿ ಕೊಲಾಜ್ ಸ್ಪರ್ಧೆ
Update: 2016-07-22 20:11 IST
ಮಂಗಳೂರು,ಜು.21: ಜೆಪ್ಪು ಸಂತ ಜೋಸೆಫ್ ಕಾಲೇಜಿನ ಪರಿಸರ ಹಾಗೂ ಮಾನವ ಹಕ್ಕುಗಳ ಸಂಘದ ವತಿಯಿಂದ ಇತ್ತೀಚೆಗೆ ಕೊಲಾಜ್ ಚಿತ್ರಗಾರಿಕೆ ಸ್ಪರ್ಧೆ ನಡೆಯಿತು.
ಪರಿಸರವನ್ನು ಉಳಿಸಿದರೆ ಪರಿಸರ ಮನುಷ್ಯನನ್ನು ಉಳಿಸುತ್ತದೆ ಎಂಬ ವಿಷಯದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ತೃತೀಯ ಬಿಕಾಂ ನ ಆರೀಫ್ ಬಳಗ ವಿಜೇತರಾದರು. ತೀರ್ಪುಗಾರರಾಗಿ ಜೈದೇವ್ ಆಗಮಿಸಿದ್ದರು. ಸಂಘದ ನಿರ್ವಾಹಕಿ ಆರ್.ದುರ್ಗ , ಉಪನ್ಯಾಕಿ ಲವೀನಾ ಆನ್ಸಿಲಾ ಉಪಸ್ಥಿತರಿದ್ದರು.