ಜು.24ರಂದು ಮಲಾರಿನಲ್ಲಿ ಮದರಸ ಮಕ್ಕಳಿಗೆ ಪುಸ್ತಕ ವಿತರಣೆ, ಸನ್ಮಾನ ಕಾರ್ಯಕ್ರಮ

Update: 2016-07-23 10:02 GMT

ಮಂಗಳೂರು, ಜು.23: ಎಂಇಎಸ್ ಮಲಾರ್ ಇದರ ವತಿಯಿಂದ ಮಲಾರ್ ನೂರುಲ್ ಇಸ್ಲಾಂ ಮದರಸ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮವು ಜು.24ರಂದು ಸಂಜೆ 4 ಗಂಟೆಗೆ ನೂರುಲ್ ಇಸ್ಲಾಂ ಮದರಸ ಹಾಲ್ ಮಲಾರ್ನಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲಾರ್ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಚ್.ಎಂ.ಮುಹಮ್ಮದ್ ಮಾಸ್ಟರ್ ವಹಿಸಲಿದ್ದು, ಎಂಇಎಸ್ಮಲಾರ್ನ ಗೌರವಾಧ್ಯಕ್ಷ ಮುಸ್ತಫಾ ಪಾವೂರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮಲಾರ್ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್‌ಅಬ್ದುರ್ರಝಾಕ್ ಅಝ್ಹರಿ ಉದ್ಘಾಟನೆಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಜುಮಾ ಮಸೀದಿಯ ಖತೀಬ್ ಸ್ವದಕತ್ತುಲ್ಲಾ ಫೈಝಿ, ಎಂಇಎಸ್ ಮಲಾರ್ನ ಅಧ್ಯಕ್ಷ ಇಸ್ಮಾಯೀಲ್ ಕೋಡಿ, ಝಕರಿಯ ಮಲಾರ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ತಮಿಳುನಾಡಿನ ತಮಿಳು ಇಂಟರ್‌ನ್ಯಾಷನಲ್ ಯೂನಿವರ್ಸಿಟಿಯಿಂದ ಡಾಕ್ಟರೇಟ್ ಪದವಿ ಪಡೆದ ಡಾ. ಕೆ.ಎಸ್.ಅಮೀರ್ ಅಹ್ಮದ್ ತುಂಬೆಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಎಂಇಎಸ್ ಮಲಾರ್ನ ಪ್ರಧಾನ ಕಾರ್ಯದರ್ಶಿ ಝಾಹೀದ್ ಮಲಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News