ನಿಧನ

Update: 2016-07-25 18:28 GMT

ಪುರಸಭಾ ಮಾಜಿ ಸದಸ್ಯ ಎಂ. ಶೀನಪ್ಪ
ಮೂಡುಬಿದಿರೆ, ಜು.25: ಇಲ್ಲಿನ ಪುರಸಭಾ ಮಾಜಿ ಸದಸ್ಯ, ನಾರಾಯಣ ಸಾಮಿಲ್‌ನ ಮಾಲಕ ಎಂ.ಶೀನಪ್ಪ(70) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಸೋಮವಾರ ಮಧ್ಯಾಹ್ನ ಅವರ ಮಾಸ್ತಿಕಟ್ಟೆಯ ನಿವಾಸದ ಆವರಣದಲ್ಲಿ ಶವಸಂಸ್ಕಾರ ನಡೆಸಲಾಯಿತು. ಶಾಸಕರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್, ಪುರಸಭಾ ಅಧ್ಯಕ್ಷೆ ರೂಪಾ ಶೆಟ್ಟಿ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಕ್ಷೇತ್ರಾಧ್ಯಕ್ಷ ಸುದರ್ಶನ್ ಎಂ. ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ. ಶೋಕಾರ್ಥ ಮಧ್ಯಾಹ್ನ ಒಂದು ಗಂಗೆೆ ಪೇಟೆಯ ವರ್ತಕರು ವ್ಯಾಪಾರ ವಹಿವಾಟು ನಡೆಸದೆ ಸ್ಥಗಿತಗೊಳಿಸಿದ್ದರು. ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News