ನಿಧನ

Update: 2016-07-25 18:29 GMT


ಶೀನಪ್ಪ ಗೌಡ ಕೋಂಕ್ಯಾಡಿ
ಪುತ್ತೂರು, ಜು.25: ಕಡಬ ಗ್ರಾಮದ ಪಿಜಕಳ ಕೋಂಕ್ಯಾಡಿ ನಿವಾಸಿ ಶೀನಪ್ಪ ಗೌಡ(73) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೋಮವಾರ ನಿಧನ ಹೊಂದಿದ್ದಾರೆ.

ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೇಕರ, ನಿರ್ದೇಶಕಿ ಲೀಲಾವತಿ ಎ.ಶೆಟ್ಟಿ, ಕಡಬ ಗ್ರಾಪಂ ಅಧ್ಯಕ್ಷ ಬಾಬು ಮುಗೇರ, ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ, ಸದಸ್ಯರಾದ ಅಶ್ರಫ್ ಶೇಡಿಗುಂಡಿ, ಸರೋಜಿನಿ ಆಚಾರ್ಯ, ಹರ್ಷ, ಕಡಬ ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಗೌಡ ಎಂ.ಎಸ್, ಕಡಬ ಸಿ.ಎ. ಬ್ಯಾಂಕ್ ಸಿಬ್ಬಂದಿ ಹಾಗೂ ವಿವಿಧ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಮೃತರು ಪತ್ನಿ, ಕಡಬ ಸಿ.ಎ.ಬ್ಯಾಂಕ್ ಉದ್ಯೋಗಿ ಆನಂದ ಗೌಡ ಕೋಂಕ್ಯಾಡಿ ಸೇರಿದಂತೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನುಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News