ಬೆಂಕಿ ತಗಲಿ ವೃದ್ಧೆ ಮೃತ್ಯು
Update: 2016-07-26 23:54 IST
ಕಡಬ, ಜು.26: ಹಳೆನೇರಂಕಿ ಕದ್ರ ನಿವಾಸಿ ಮಾನಕ್ಕ(73) ಎಂಬವರು ಜುಲೈ 7ರಂದು ಸ್ನಾನಗೃಹದಲ್ಲಿ ನೀರು ಕಾಯಿಸುತ್ತಿದ್ದ ವೇಳೆ ಬೆಂಕಿ ತಗಲಿದ್ದು ಸುಟ್ಟ ಗಾಯಗಳಾಗಿತ್ತು.
ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಸೋಮವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.