×
Ad

ಜು.28 ರಂದು ಕಾಸರಗೋಡು ಜಿಲ್ಲಾ ಪಂಚಾಯತ್ ನ ಉದುಮ ಕ್ಷೇತ್ರದ ಉಪಚುನಾವಣೆ

Update: 2016-07-27 18:22 IST

ಕಾಸರಗೋಡು,ಜು.2: ಕುತೂಹಲ ಕೆರಳಿಸಿರುವ ಕಾಸರಗೋಡು ಜಿಲ್ಲಾ ಪಂಚಾಯತ್ ನ  ಉದುಮ ಕ್ಷೇತ್ರದ ಉಪಚುನಾವಣೆ  ನಾಳೆ ( 28) ನಡೆಯಲಿದೆ.

ಕಾಂಗ್ರೆಸ್ , ಐ ಎನ್ ಎಲ್  ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ಚುನಾವಣೆ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ಮತ್ತು  ಸಿಪಿಎಂ ನೇತೃತ್ವದ ಎಡರಂಗಕ್ಕೆ   ನಿರ್ಣಾಯಕವಾಗಿದೆ. ಎಡರಂಗದಿಂದ ಐ ಎನ್ ಎಲ್ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದೆ.

ಕಾಂಗ್ರೆಸ್ ಸದಸ್ಯ ಪಾದೂರು ಕುಞಮು  ಹಾಜಿ ಯವರ ನಿಧನದಿಂದ ಈ ಕ್ಷೇತ್ರ ತೆರವಾಗಿದ್ದು. ಆಡಳಿತಾರೂಢ ಐಕ್ಯರಂಗ ಮತ್ತು ಪ್ರತಿಪಕ್ಷವಾದ ಎಡರಂಗ  ತಲಾ ಏಳು ಸ್ಥಾನ ಹೊಂದಿದೆ. 

ಕಾಂಗ್ರೆಸ್ ನಿಂದ ಪಾದೂರು ಕುಞಮು  ಹಾಜಿ ಯವರ  ಪುತ್ರ  ಪಿ .ಕೆ . ಎಂ  ಶಾನ್ ವಾಜ್,  ಐ ಎಂ ಎಲ್ ನಿಂದ ಮೊಯ್ದಿನ್ ಕು೦ಞ   ಕಲ್ನಾಡ್ ಮತ್ತು  ಬಿಜೆಪಿಯಿಂದ  ಎನ್. ಬಾಬು ರಾಜು ಕಣದಲ್ಲಿದ್ದಾರೆ.

2015 ರ ನವಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ  ಪಾದೂರು ಕುಞಮು  ಹಾಜಿ  6437 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಮತದಾನ ನಾಳೆ ಬೆಳಿಗ್ಗೆ 7 ರಿಂದ ಐದರ ತನಕ ನಡೆಯಲಿದೆ. 

72 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದ್ದು, 51,935 ಮಂದಿ ಮತದಾರರಿದ್ದಾರೆ.

ಜುಲೈ  29 ರಂದು  ಬೆಳಿಗ್ಗೆ ಎಂಟು ಗಂಟೆಗೆ ಮತ ಎಣಿಕೆ ನಡೆಯಲಿದ್ದು , ಹತ್ತು ಗಂಟೆಯೊಳಗೆ ಫಲಿತಾಂಶ ಹೊರಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News