×
Ad

ಗಾಂಜಾ ಸಹಿತ ಇಬ್ಬರ ಬಂಧನ

Update: 2016-07-27 23:58 IST

ಕಾಸರಗೋಡು, ಜು.27: ಕಾಸರಗೋಡಿನಲ್ಲಿ ಬುಧವಾರ ಬೆಳಗ್ಗೆ ಎರಡು ಕಿ.ಗ್ರಾಂ ಗಾಂಜಾ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
 ಬಂಧಿತ ಆರೋಪಿಗಳನ್ನು ಮಧೂರು ನೀರ್ಚಾಲು ರಸ್ತೆಯ ಮುಹಮ್ಮದ್ ಶಿಹಾಬ್(27) ಮತ್ತು ಸಿ.ಎಚ್.ಅಬ್ದುಲ್ ಸಲೀಂ (23) ಎಂದು ಗುರುತಿ ಸಲಾಗಿದೆ. ಓರ್ವ ಪರಾರಿಯಾಗಿದ್ದಾನೆ. ಪರಾರಿಯಾದವನು ಹರ್ಷದ್‌ಎಂದು ತಿಳಿದುಬಂದಿದೆ. ಈತ ಕೂಡ್ಲು ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿ ಎನ್ನಲಾಗಿದೆ.
          ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ರಾಷ್ಟ್ರೀಯ ಹೆದ್ದಾರಿಯ ಎರಿಯಾಲ್ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿಬಂದ ನಂಬರ್ ಇಲ್ಲದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಕಾರು ಮಂಗಳೂರು ಕಡೆಯಿಂದ ಕಾಸರಗೋಡಿಗೆ ಬರುತ್ತಿತ್ತು. ಕಾರಿನ ಢಿಕ್ಕಿಯಲ್ಲಿ ಬ್ಯಾಗ್‌ನಲ್ಲಿ ಬಚ್ಚಿಟ್ಟು ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಜಿಲ್ಲೆಗೆ ಭಾರೀಪ್ರಮಾಣದಲ್ಲಿ ಗಾಂಜಾಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕಾಸರಗೋಡಿನಲ್ಲಿ ಎರಡು ದಿನಗಳ ಅವಧಿಯಲ್ಲಿ ಐದೂವರೆ ಕಿ.ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News