ಸಾವಿನಲ್ಲೂ ಆನಂದ ಪಡೆಯುವ ವಿಕೃತರು !

Update: 2016-07-30 11:50 GMT

ಮಂಗಳೂರು, ಜು.30: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರು ಶನಿವಾರ ನಿಧನರಾಗಿದ್ದಾರೆ. ಈ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿಕೃತ ಹೇಳಿಕೆಗಳನ್ನು ಹಂಚಿಕೊಂಡಿದ್ದು ವ್ಯಾಪಕ ಆಕ್ರೋಶ ಹಾಗು ಅಸಮಾಧಾನಕ್ಕೆ ಕಾರಣವಾಗಿದೆ.

"ಜನರ ಶಾಪದಿಂದ ಹೀಗಾಗಿದೆ"., "ಕೊನೆಗೂ ಸಿದ್ದರಾಮಯ್ಯ ಪುತ್ರ ನಿಧನ" ಇತ್ಯಾದಿ ಹೇಳಿಕೆಗಳು ಹಾಗೂ ಸಂಭ್ರಮ, ಸಂತಸ ಸೂಚಿಸುವ ಇಮೋಜಿಗಳನ್ನು ಹಂಚಿಕೊಂಡಿರುವ ಸ್ಕ್ರೀನ್ ಶಾಟ್ಗಳು ವಾರ್ತಾಭಾರತಿಗೆ ಲಭಿಸಿವೆ.

ಪೊಲೀಸರು ಇಂತಹ ವಿಕೃತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News