ಪುತ್ತೂರು: ಆಸತ್ರೆಗೆ ದಾಖಲಾಗಿದ್ದ ರೋಗಿ ನಾಪತ್ತೆ

Update: 2016-08-03 13:26 GMT

ಪುತ್ತೂರು, ಆ.3: ಜ್ವರ ಪೀಡಿತರಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಆಸತ್ರೆಯಿಂದ ನಾಪತ್ತೆಯಾದ ಘಟನೆ ಮಂಗಳವಾರ ನಡೆದಿದ್ದು, ಘಟನೆಯ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ಇರುಬೈಲು ನಿವಾಸಿ ಚೀಂಕ್ರ ಎಂಬವರ ಪುತ್ರ ಬಾಬು (37) ನಾಪತ್ತೆಯಾದ ವ್ಯಕ್ತಿ. ಜ್ವರದಿಂದ ಬಳುತ್ತಿದ್ದ ಬಾಬು ಕಳೆದ ಶನಿವಾರ ಚಿಕಿತ್ಸೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ರಾತ್ರಿ 11 ಗಂಟೆಯ ವೇಳೆಗೆ ಆಸತ್ರೆಯಿಂದ ಅವರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಘಟನೆಯ ಕುರಿತು ಬಾಬು ಅವರ ಸಹೋದರಿ ಲೀಲಾ ಎಂಬವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News