ಉದುಮ: ಜಿ.ಪಂ. ಸದಸ್ಯರಾಗಿ ಶಾನವಾಝ್ ಪ್ರಮಾಣವಚನ ಸ್ವೀಕಾರ

Update: 2016-08-04 12:47 GMT

ಕಾಸರಗೋಡು, ಆ.4: ಜಿಲ್ಲಾ ಪಂಚಾಯತ್‌ನ ಉಪ ಚುನಾವಣೆಯಲ್ಲಿ ಉದುಮ ಕ್ಷೇತ್ರದಿಂದ ಆಯ್ಕೆಯಾದ ಶಾನವಾಝ್ ಪಾದೂರು ಗುರುವಾರ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್ ಪ್ರಮಾಣವಚನ ಬೋಧಿಸಿದರು.

ಶಾಸಕ ಪಿ.ಬಿ. ಅಬ್ದುರ್ರಝಾಕ್, ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಫೈಜಾ ಅಬೂಬಕರ್, ಫರೀದಾ ಝಾಕೀರ್ ಅಹ್ಮದ್, ಸದಸ್ಯರಾದ ವಿ.ಪಿ.ಪಿ. ಮುಸ್ತಫಾ, ಎಂ.ನಾರಾಯಣನ್, ಚೆಮ್ನಾಡ್ ಪಂಚಾಯತ್ನ ಅಧ್ಯಕ್ಷ ಕಲ್ಲಟ್ರ ಅಬ್ದುಲ್ ಖಾದರ್, ಮಾಜಿ ಶಾಸಕ ಕೆ.ಪಿ.ಕುಂಞಿಕಣ್ಣನ್ ಹಾಗೂ ವಿವಿಧ ರಾಜಕೀಯ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಇ.ಪಿ. ರಾಜಮೋಹನನ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News