ಕಾಸರಗೋಡು: ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ಎಸ್‌ಡಿಪಿಐ ಧರಣಿ

Update: 2016-08-05 13:13 GMT

ಕಾಸರಗೋಡು, ಆ.5: ಕಾಸರಗೋಡು ಜನರಲ್ ಆಸ್ಪತ್ರೆಯ ಅವ್ಯವಸ್ಥೆಯನ್ನು ಖಂಡಿಸಿ ಎಸ್ಡಿಪಿಐ ಶುಕ್ರವಾರ ಜನರಲ್ ಆಸ್ಪತ್ರೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿತು.

ಧರಣಿಯನ್ನು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಎನ್.ಯು. ಅಬ್ದುಸ್ಸಲಾಂ ಉದ್ಘಾಟಿಸಿದರು. ಜನರಲ್ ಆಸ್ಪತ್ರೆಯಲ್ಲಿ ಎಕ್ಸ್ ರೇ ಯಂತ್ರ ಸೇರಿದಂತೆ ಹಲವು ಸೌಲಭ್ಯಗಳು ಲಭಿಸುತ್ತಿಲ್ಲ. ಖಾಸಗಿ ಲ್ಯಾಬ್‌ಗಳಿಗೆ ಲಾಭ ತರಲು ಆಸ್ಪತ್ರೆ ಅಧಿಕಾರಿಗಳು, ವೈದ್ಯರು ಯತ್ನಿಸುತ್ತಿದ್ದಾರೆ. ಬಡ ರೋಗಿಗಳಿಂದಲೂ ಹಣ ಸುಲಿಗೆ ಮಾಡುತ್ತಿದ್ದಾರೆ. ದಲಿತ ಮಹಿಳೆಯಿಂದಲೂ ಲಂಚ ಪಡೆಯಲಾಗಿದ್ದು, ಬಡ ರೋಗಿಗಳ ಬಗ್ಗೆ ತಳೆಯುತ್ತಿರುವ ನಿಲುವಿನ ಬಗ್ಗೆ ಉಗ್ರ ಹೋರಾಟ ಅನಿವಾರ್ಯ ಎಂದು ಧರಣಿನಿರತರು ಆರೋಪಿಸಿದರು.

ಈ ಸಂದರ್ಭ ಮುಖಂಡರಾದ ಮನಾಫ್, ಅಬ್ದುಲ್ಲ, ಮುಹಮ್ಮದ್, ಝಕಾರಿಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News