ಮಂಗಳೂರು: ಹಜ್ ಯಾತ್ರಿಕರ ಮೂರನೆ ತಂಡ ನಿರ್ಗಮನ

Update: 2016-08-06 13:59 GMT

ಮಂಗಳೂರು, ಆ.5: ಕೇಂದ್ರ ಹಜ್ ಸಮಿತಿ ವತಿಯಿಂದ ಇಂದು ಮೂರನೆ ತಂಡ ಹಜ್ ಯಾತ್ರೆಗೆ ತೆರಳಿದೆ. ಹಜ್ ಯಾತ್ರಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನವು ಇಂದು ಬೆಳಗ್ಗೆ 10:55ಕ್ಕೆ ಬಜ್ಪೆ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ.

ಈ ಸಂದರ್ಭದಲ್ಲಿ ಕೇಂದ್ರ ಹಜ್ ಸಮಿತಿಯ ಸದಸ್ಯ ಮುಹಮ್ಮದ್ ಇರ್ಫಾನ್ ಅಹ್ಮದ್, ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ವೆ.ಮುಹಮ್ಮದ್ ಕುಂಞಿ, ವಕ್ಫ್ ಸಲಹಾ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಯಹ್ಯಾನಕ್ವಾ ಮಲ್ಪೆ ಉಪಸ್ಥಿತರಿದ್ದರು. ಮೂರನೆ ತಂಡದಲ್ಲಿ 78 ಮಂದಿ ಪುರುಷರು ಹಾಗೂ 74 ಮಂದಿ ಮಹಿಳೆಯರ ಸಹಿತ ಒಟ್ಟು 152 ಮಂದಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News