ಕೇರಳ ರಾಜ್ಯ ಮಟ್ಟದ ಹ್ಯಾಂಡ್ಬಾಲ್ ಪಂದ್ಯಾವಳಿ: ಎರ್ನಾಕುಲಂ, ಕಣ್ಣೂರು ಜಿಲ್ಲೆ ಪ್ರಥಮ
Update: 2016-08-07 05:22 GMT
ಕಾಸರಗೋಡು, ಆ.7: ಸಿಪಿಸಿಆರ್ಐನಲ್ಲಿ ಕೇಂದ್ರೀಯ ವಿದ್ಯಾಲಯಗಳ ರಾಜ್ಯ ಮಟ್ಟದ ಹ್ಯಾಂಡ್ಬಾಲ್ ಪಂದ್ಯಾವಳಿ ನಡೆಯಿತು.
ಈ ಪಂದ್ಯಾಟದಲ್ಲಿ 14 ವರ್ಷದ ಕೆಳಗಿನ ವಿಭಾಗದವರ ಸ್ಪರ್ಧೆಯಲ್ಲಿ ಎರ್ನಾಕುಲಂ ಮತ್ತು 19 ವರ್ಷ ಕೆಳಗಿನವರ ವಿಭಾಗದಲ್ಲಿ ಕಣ್ಣೂರು ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ.
ಕಣ್ಣೂರು, ಪಾಲಕ್ಕಾಡ್, ಎರ್ನಾಕುಲಂ ಮತ್ತು ತಿರುವನಂತಪುರ ಜಿಲ್ಲೆಗಳ ಸುಮಾರು 90ರಷ್ಟು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಸಮಾರೋಪ ಸಮಾರಂಭವನ್ನು ಸಿಪಿಸಿಆರ್ಐನ ಹಿರಿಯ ವಿಜ್ಞಾನಿ ಡಾ.ವಿನಾಯಕ ಹೆಗ್ಡೆ ಉದ್ಘಾಟಿಸಿದರು.
ಸಮಾರೋಪ ಸಮಾರಂಭವು ಕೇಂದ್ರೀಯ ವಿದ್ಯಾಲಯ 02ರ ಪ್ರಾಂಶುಪಾಲ ಎಂ.ಕೆ.ರಾಜಪ್ಪಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಶಾಲಾ ಪ್ರಭಾರ ಪ್ರಾಂಶುಪಾಲ ಸುಶ್ಮಾ ವಿ. ಸ್ವಾಗತಿಸಿದರು. ಕ್ರೀಡಾ ಶಿಕ್ಷಕ ವಿನೋದ್ ಕುಮಾರ್ ವಂದಿಸಿದರು.