ಮೂಳೂರು: ಅಲ್ ಇಹ್ಸಾನ್ ಅಕಾಡಮಿ ಸ್ಕೂಲ್‌ನಲ್ಲಿ ಸ್ವಾತಂತ್ರ ದಿನಾಚರಣೆ

Update: 2016-08-15 15:04 GMT

ಮಂಗಳೂರು, ಆ.15: ಗಲ್ಫ್ ರಾಷ್ಟ್ರದಲ್ಲಿ ಕಾರ್ಯಾಚರಿಸುತ್ತಿರುವ ಅನಿವಾಸಿ ಸಂಘಟನೆಯಾದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಅಧೀನ ಸಂಸ್ಥೆ ಅಲ್ ಇಹ್ಸಾನ್ ಅಕಾಡಮಿ ಸ್ಕೂಲ್ ಹಾಗೂ ಮರ್ಕಝ್‌ನಲ್ಲಿ 70ನೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಅಲ್ ಇಹ್ಸಾನ್ ಅಕಾಡಮಿ ಸ್ಕೂಲ್‌ನಲ್ಲಿ ಡಿಕೆಎಸ್ಸಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಉಳ್ಳಾಲ ಅರಮೆಕ್ಸ್ ಹಾಗೂ ಮರ್ಕಝ್ ಕ್ಯಾಂಪಸ್ನಲ್ಲಿ ಮರ್ಕಝ್ ಕಮಿಟಿಯ ಉಪಾಧ್ಯಕ್ಷ ಎಂ.ಎಚ್.ಬಿ.ಮುಹಮ್ಮದ್ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಡಿಕೆಎಸ್‌ಸಿ ಗಲ್ಫ್ ರಾಷ್ಟ್ರಗಳ ನೇತಾರ ಇಸ್ಮಾಯಿಲ್ ಹಾಜಿ ಕಿನ್ಯ, ಯುಎಇ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಹೆಜಮಾಡಿ , ಯುಎಇ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಎಂ.ಇ.ಮೂಳೂರು, ಅಲ್ ಇಹ್ಸಾನ್ ಎಜುಕೇಷನ್ ಸೆಂಟರ್ನ ಕರೆಸ್ಪಾಂಡೆಂಟ್ ಅಡ್ವೊಕೇಟ್ ಮುಹಮ್ಮದ್ ಅಲಿ, ಕೇಂದ್ರ ಸಮಿತಿ ಮುಖಂಡರಾದ ಶಂಶುದ್ದೀನ್ ಬಳ್ಕುಂಜೆ, ಹುಸೈನಬ್ಬ ಮೂಳೂರು, ಫಾರೂಕ್ ಕರ್ನಿರೆ, ಮರ್ಕಝ್ ಕಮಿಟಿ ಯ ಉಪಾಧ್ಯಕ್ಷ ಬದ್ರುದ್ದೀನ್ ಬಜ್ಪೆ, ಡೆವಲಪ್‌ಮೆಂಟ್ ಕಮಿಟಿ ಅಧ್ಯಕ್ಷ ಇಸಾಕ್ ಬೊಳ್ಳಾಯಿ, ಉಪಾಧ್ಯಕ್ಷ ವೈ.ಅಹ್ಮದ್ ಹಾಜಿ , ರಾಸ್ ಅಲ್‌ಖೈಮಾ ಯುನಿಟ್ ಅಧ್ಯಕ್ಷ ಮುಹಮ್ಮದ್ ಅಲಿ ಮೂಡುತೋಟ, ಯುಎಇ ರಾಷ್ಟ್ರೀಯ ಸಮಿತಿಯ ಮುಖಂಡರಾದ ನವಾಝ್ ಕೋಟೆಕಾರ್, ಇಸ್ಮಾಯೀಲ್ ಬಾರೊದ್, ನಝೀರ್ ಕಣಂಗಾರ್, ಆಮೀರ್ ಹಳೆಯಂಗಡಿ ಭಾಗವಹಿಸಿದ್ದರು.

ಮರ್ಕಝ್ ಮ್ಯಾನೇಜರ್ ಮೌಲಾನಾ ಮುಸ್ತಫಾ ಸಆದಿ, ಕಾಲೇಜು ಪ್ರಾಂಶುಪಾಲ ಹಬೀಬುರ್ರಹ್ಮಾನ್, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಜಯಪ್ರಸನ್ನ ಕುಮಾರಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಪ್ರಮೀಳಾ , ಮರ್ಕಝ್‌ನ ಅಸಿಸ್ಟೆಂಟ್ ಮ್ಯಾನೇಜರ್ ಸಿದ್ದಿಕ್ ಸಅದಿ ಆತೂರ್, ವೈ.ಬಿ.ಸಿ.ಬಶೀರ್ ಅಲಿ, ಫಾರೂಕ್ ಸುರತ್ಕಲ್, ಅಬ್ದುಲ್ ಹಮೀದ್ ಹೆಜಮಾಡಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News