ವಿಶ್ವಕರ್ಮ ಯುವ ಮಿಲನ್‌ನಿಂದ ವಿಭಿನ್ನ ಸ್ವಾತಂತ್ರೋತ್ಸವ

Update: 2016-08-16 08:01 GMT

ಮಂಗಳೂರು, ಆ.16: ವಿಶ್ವಕರ್ಮ ಯುವ ಮಿಲನ್‌ನ ಸದಸ್ಯರು ದೇಶದ 70ನೆ ಸ್ವಾತಂತ್ರೋತ್ಸವವನ್ನು ವಿಭಿನ್ನವಾಗಿ ಆಚರಿಸಿದರು.ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿಗೆ ಹೂಗುಚ್ಛವನ್ನು ನೀಡಿ ಅಭಿನಂದಿಸಿ, ಸ್ವಾತಂತ್ರೋತ್ಸವದ ಶುಭಾಶಯಗಳನ್ನು ಕೋರಿದರು.

ಸಂಚಾರ ಪೊಲೀಸ್ ವಿಭಾಗದ ಎಸ್ಸೈ ಬಿ. ಮುಕುಂದ್, ಕಾನ್‌ಸ್ಟೇಬಲ್‌ಗಳಾದ ಚಾರ್ಲ್ಸ್ ವಿಕ್ಟರ್ ಡಿಸೋಜ, ಬಾಬು ಶೆಟ್ಟಿ ಮತ್ತಿತರರು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ತೆರಳಿ, ಹೂಗುಚ್ಛ ನೀಡಿ, ಅವರು ಸಲ್ಲಿಸುತ್ತಿರುವ ಸೇವೆಗೆ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಯುವ ಮಿಲನ್‌ನ ರಾಜ್ಯಾಧ್ಯಕ್ಷ ವಿಕ್ರಮ್ ಐ. ಆಚಾರ್ಯ, ತಾಲೂಕು ಘಟಕದ ಅಧ್ಯಕ್ಷ ಅರುಣ್ ಪಂಜಿಕಲ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಸಂಘಟನಾ ಕಾರ್ಯದರ್ಶಿ ಸೂರಜ್ ಆಚಾರ್ಯ ತೊಕ್ಕೊಟ್ಟು ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News