ತೆರವಾಗಿರುವ ಗ್ರಾ.ಪಂ. ಸ್ಥಾನಗಳಿಗೆ ಉಪಚುನಾವಣೆ: ಅಧಿಸೂಚನೆ ಪ್ರಕಟ

Update: 2016-08-17 17:36 GMT

ಮಂಗಳೂರು, ಆ. 17: ಗ್ರಾಮ ಪಂಚಾಯತ್‌ಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳನ್ನು ತುಂಬಲು ರಾಜ್ಯ ಚುನಾವಣಾ ಆಯೋಗವು ಈಗಾಗಲೇ ವೇಳಾಪಟ್ಟಿಯನ್ನು ಹೊರಡಿಸಿದ್ದು, ಆ. 16 ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಆ.19ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಆ.20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಆ.22ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ. ಆ. 28ರಂದು ಮತದಾನ. ಆ.31 ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಮಂಗಳೂರು ತಾಲೂಕಿಗೆ ಸಂಬಂಧಿಸಿದಂತೆ ಚುನಾವಣೆ ನಡೆಯಲಿರುವ ಕ್ಷೇತ್ರದ ಹೆಸರು ಮತ್ತು ಸಂಖ್ಯೆ

ಬೆಳುವಾಯಿ-4 ಮೀಸಲಾತಿ ಪರಿಶಿಷ್ಟ ಪಂಗಡ (ಮಹಿಳೆ),

ಬಜಪೆ-2 ಹಿಂದುಳಿದ ವರ್ಗ ಎ,

ಬಡಗ ಉಳಿಪಾಡಿ-1 ಹಿಂದುಳಿದ ವರ್ಗ ಎ,

ಮಲ್ಲೂರು-1, ಪರಿಶಿಷ್ಟ ಪಂಗಡ (ಮಹಿಳೆ),

ಮಲ್ಲೂರು-2 ಪರಿಶಿಷ್ಟ ಜಾತಿ (ಮಹಿಳೆ),

ಅಡ್ಯಾರು-1 ಹಿಂದುಳಿದ ವರ್ಗ ಎ (ಮಹಿಳೆ)

ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವವರು ತಮ್ಮ ನಾಮಪತ್ರಗಳನ್ನು ನಿಗದಿತ ಅವಧಿಯೊಳಗೆ ಆಯಾಯ ಗ್ರಾಮ ಪಂಚಾಯತ್‌ನಲ್ಲಿ ನಿಗದಿ ಪಡಿಸಿದ ಚುನಾವಣಾಧಿಕಾರಿಗಳಿಗೆ ಸಲ್ಲಿಸುವಂತೆ ತಾಲೂಕು ತಹಶೀಲ್ದಾರ್ ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News