ವ್ಯಕ್ತಿ ನಾಪತ್ತೆ

Update: 2016-08-18 18:32 GMT

ಮಂಗಳೂರು, ಆ.18: ಮಂಜನಾಡಿ ಗ್ರಾಮದ ಕಲ್ಕಟ್ಟದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದವರನ್ನು ಮುಹಮ್ಮದ್ ಆರೀಫ್(27) ಎಂದು ಗುರುತಿಸಲಾಗಿದೆ. ಅವರು ಮಂಗಳೂರು ದಕ್ಕೆಯಿಂದ ಮೀನು ಖರೀದಿಸಿ ಚೆಂಬುಗುಡ್ಡೆ ಎಂಬಲ್ಲಿ ಮಾರಾಟ ಮಾಡುತ್ತಿದ್ದರು. ಆ.11 ರಂದು ಬೆಳಗ್ಗೆ 4:30ಕ್ಕೆ ಅವರ ಮನೆ ಮಂಜನಾಡಿ ಗ್ರಾಮದ ಕಲ್ಕಟ್ಟದಿಂದ ಮೀನು ವ್ಯಾಪಾರಕ್ಕೆಂದು ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಎತ್ತರ 5 ಅಡಿ 6 ಇಂಚು, ಸಾಧಾರಣ ಮೈಕಟ್ಟು , ಕಾಫಿ ಬಣ್ಣದ ನೈಟ್ ಪ್ಯಾಂಟ್, ನೀಲಿಬಣ್ಣದ ಅರ್ಧ ತೋಳಿನ ಶರ್ಟ್ ಧರಿಸಿರುತ್ತಾರೆ. ಕನ್ನಡ, ತುಳು,ಹಿಂದಿ, ಇಂಗ್ಲೀಷ್, ಮಲಯಾಳಂ ಭಾಷೆ ಮಾತನಾಡುತ್ತಾರೆ.
ಇವರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಕೊಣಾಜೆ ಪೊಲೀಸ್ ಠಾಣೆಗೆ ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News