ಪ್ರಚಂಡ ಭಾರತ ಭೇಟಿಗೆ ಮೋದಿ ಆಹ್ವಾನ

Update: 2016-08-20 14:05 GMT

ಹೊಸದಿಲ್ಲಿ,ಆ.20: ಭಾರತ ಹಾಗೂ ನೇಪಾಳ ನಡುವೆ ಸ್ನೇಹ ಹಾಗೂ ಬಾಂಧವ್ಯದ ಪಾರಂಪರಿಕ ನಂಟುಗಳನ್ನು ಬಲಪಡಿಸುವ ಬದ್ಧತೆಯನ್ನು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ನೂತನ ಪ್ರಧಾನಿ ಪುಷ್ಪಕುಮಾರ್ ದಹಾಲ್ ‘ಪ್ರಚಂಡ’ ಅವರಿಗೆ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ.

 ಹೊಸದಿಲ್ಲಿಯಲ್ಲಿ ಶನಿವಾರ ತನ್ನನ್ನು ಭೇಟಿ ಮಾಡಿದ ನೇಪಾಳದ ಉಪಪ್ರಧಾನಿ ಹಾಗೂ ಗೃಹಸಚಿವ ಬಿಮಲೇಂದ್ರ ನಿಧಿ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಅವರು ಈ ಆಹ್ವಾನವನ್ನು ನೀಡಿದ್ದಾರೆ.

  ಮಾತುಕತೆಯ ವೇಳೆ ಪ್ರಧಾನಿ ಮೋದಿ,ನೂತನ ನೇಪಾಳ ಸರಕಾರಕ್ಕೆ ಶುಭಾಶಯಗಳನ್ನು ಕೋರಿದರು ಹಾಗೂ ನೂತನ ಪ್ರಧಾನಿ ಪ್ರಚಂಡ ಅವರು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಬೇಕೆಂದು ಆಹ್ವಾನ ನೀಡಿದರೆಂದು ಪ್ರಧಾನಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News