ನೆಲ್ಯಾಡಿ: ಎಸ್‌ಡಿ.ಐ ವತಿಯಿಂದ ಆ್ಯಂಬುಲೆನ್ಸ್ ಉದ್ಘಾಟನೆ, ರಕ್ತದಾನ ಶಿಬಿರ

Update: 2016-08-20 18:21 GMT

ಉಪ್ಪಿನಂಗಡಿ, ಆ.20: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ ನೆಲ್ಯಾಡಿ ವಲಯ ವತಿಯಿಂದ ಆ್ಯಂಬುಲೆನ್ಸ್ ಉದ್ಘಾಟನೆ ಹಾಗೂ ರಕ್ತದಾನ ಶಿಬಿರವು ನೆಲ್ಯಾಡಿ ಪೇಟೆಯಲ್ಲಿ ನಡೆಯಿತು. ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಶ್ರಫ್ ಅಗ್ನಾಡಿ ಪಕ್ಷದ ಧ್ವಜ ಮೂಲಕ ಮತ್ತು ನೆಲ್ಯಾಡಿ ಜುಮ್ಮಾ ಮಸೀದಿಯ ಖತೀಬ್ ಮುಹಮ್ಮದ್ ಸಖಾಫಿ ದುಆ ನೆರವೇರಿಸಿ ಆ್ಯಂಬುಲೆನ್ಸ್‌ಗೆ ಚಾಲನೆ ನೀಡಿದರು.

ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐನ ರಾಜ್ಯ ಕಾರ್ಯದರ್ಶಿ ಅಲ್ಫೊನ್ಸ್ ಪ್ರಾಂಕೊ ಮುಖ್ಯ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ, ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್, ನೆಲ್ಯಾಡಿ ಜಿಲ್ಲಾ ಪಂಚಾಯತ್ ಸದಸ್ಯ ಸರ್ವೊತ್ತಮ ಗೌಡ, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಕೆ. ಇಬ್ರಾಹಿಂ ಮಾತನಾಡಿದರು.

ವೇದಿಕೆಯಲ್ಲಿ ಎಸ್‌ಡಿಪಿಐ ನೆಲ್ಯಾಡಿ ವಲಯ ಅಧ್ಯಕ್ಷ ಸುಲೈಮಾನ್ ಕೊಡ್ಲಿಪೇಟೆ, ಪಿಎಫ್‌ಐ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಇಕ್ಬಾಲ್ ಬಳ್ಳಮಂಜ, ಎಸ್‌ಡಿಪಿಐ ಬೆಳ್ತಂಗಡಿ ವಿಧಾನ ಸಬಾ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ನೆಲ್ಯಾಡಿ ಮಸೀದಿ ಕಾರ್ಯದರ್ಶಿ ಹನೀಪ್ ಸಿಟಿ, ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಪಿಎಫ್‌ಐ ನೆಲ್ಯಾಡಿ ಅಧ್ಯಕ್ಷ ಸಾದಿಕ್ ಅತ್ತಾಜೆ ಉಪಸ್ಥಿತರಿದ್ದರು.

ರಕ್ತದಾನ ಶಿಬಿರಕ್ಕೆ ಎಸ್‌ಡಿಪಿಐ ನೆಲ್ಯಾಡಿ ವಲಯದ ಅಧ್ಯಕ್ಷ ಸುಲೈಮಾನ್ ಕೊಡ್ಲಿಪೇಟೆ ರಕ್ತದಾನ ಮಡುವ ಮೂಲಕ ಚಾಲನೆ ನೀಡಿದರು. ಝುಬೈರ್ ಕೊಕ್ಕಡ ಸ್ವಾಗತಿಸಿದರು. ಸಿದ್ದೀಕ್ ಜಾಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News