ಬೆಂಕಿ ಆಕಸ್ಮಿಕದ ಗಾಯಾಳು ಮೃತ್ಯು
Update: 2016-08-23 23:34 IST
ಬೈಂದೂರು, ಆ.23: ಕಾಲ್ತೋಡು ಗ್ರಾಮದ ಮೆಟ್ಟಿನಹೊಳೆ ಎಂಬಲ್ಲಿ ಬೆಂಕಿ ಆಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಮೆಟ್ಟಿನಹೊಳೆ ಗಂಗನಾಡು ನಿವಾಸಿ ದೇವಿ(38) ಎಂದು ಗುರುತಿ ಸಲಾಗಿದೆ. ಇವರು ಜು.29 ರಂದು ರಾತ್ರಿ ಆಕಸ್ಮಿಕವಾಗಿ ಬೆಂಕಿ ಅವರ ಬಟ್ಟೆಗೆ ತಗುಲಿತ್ತು. ಇದರಿಂದ ಗಂಭೀರ ವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಸೋಮವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.