×
Ad

ಮೇಗಿನಪೇಟೆ: ಸಮಸ್ತ ಕೇರಳ ಸುನ್ನೀ ಬಾಲ ವೇದಿಕೆಯ ಅಧ್ಯಕ್ಷರಾಗಿ ಅಝೀಂ ಆಯ್ಕೆ

Update: 2016-08-24 16:47 IST

ಬಂಟ್ವಾಳ, ಆ. 24: ಮೇಗಿನಪೇಟೆ ಹೊರೈಝನ್ ಪಬ್ಲಿಕ್ ಸ್ಕೂಲ್ ಮದರಸ ವಿದ್ಯಾರ್ಥಿಗಳ ಸಮಸ್ತ ಕೇರಳ ಸುನ್ನೀ ಬಾಲ ವೇದಿಕೆಯ (ಎಸ್‌ಕೆಎಸ್‌ಬಿವಿ) 2016-17 ಸಾಲಿನ ಅಧ್ಯಕ್ಷರಾಗಿ ಅಝೀಂ ಆಯ್ಕೆಯಾಗಿದ್ದಾರೆ.

ಮದರಸ ಸದರ್ ಉಸ್ತಾದ್ ಉಮರುಲ್ ಪಾರೂಖ್ ಅರ್ಶದಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮದರಸದಲ್ಲಿ ನಡೆದ ಸಬೆಯಲ್ಲಿ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಸಾಯಿರ್ ಹಾಗೂ ರಾಶಿಕ್, ಪ್ರ. ಕಾರ್ಯದರ್ಶಿಯಾಗಿ ಅನ್ಸಾರ್, ಜೊತೆ ಕಾರ್ಯದರ್ಶಿಯಾಗಿ ನೌಶಾದ್ ಹಾಗೂ ನಿಹಾಲ್, ಕೋಶಾಧಿಕಾರಿಯಾಗಿ ಆಶಿಂ, ಹಾಗೂ ಎಂಟು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಬೆಯನ್ನು ಮರಕಣಿ ಸದರ್ ಉಸ್ತಾದ್ ಇಸ್ಮಾಯೀಲ್ ಮುಸ್ಲಿಯಾರ್ ಉದ್ಘಾಟಿಸಿದರು. ಇಸ್ಮಾಯೀಲ್ ಹನೀಫಿ, ಉಮರ್ ಸಅದಿ, ಸಂಶುದ್ದೀನ್ ಅಝಹರಿ, ಝಕಾರಿಯ ಹಿಮಮಿ, ಅಬ್ದುರ್ರಹ್ಮಾನ್ ಮುಸ್ಲಿಯಾರ್, ಸ್ಕೂಲ್ ಮೆನೇಜರ್ ಖಲಂದರ್ ಉಪಸ್ಥಿತರಿದ್ದರು. ಮದರಸ ಸದರ್ ಉಸ್ತಾದ್ ಹಕೀಂ ಅರ್ಶದಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News