×
Ad

ಕದ್ರಿ ದೇವಸ್ಥಾನ ರಸ್ತೆ ಲೋಕಾರ್ಪಣೆ

Update: 2016-08-24 21:31 IST

ಮಂಗಳೂರು, ಆ. 24: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಕದ್ರಿ ಮೊಸರುಕುಡಿಕೆಯ ಶೋಭಾ ಯಾತ್ರೆಗೆ ಅನುಕೂಲವಾಗುವಂತೆ ಮೊದಲರ್ಧ ಕಾಮಗಾರಿಯನ್ನು ತೆಂಗಿನ ಕಾಯಿ ಒಡೆಯುವ ಮೂಲಕ ಸರಕಾರಿ ಮುಖ್ಯ ಸಚೇತಕ ಐವನ್ ಡಿ ಸೋಜಾ ಲೋಕಾರ್ಪಣೆ ಮಾಡಿದರು.

ಈ ರಸ್ತೆಗೆ ಒಟ್ಟು 8.50 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ನಗರ ಯೋಜನಾ ಸ್ಥಾಯೀ ಸಮಿತಿಯ ಅಧ್ಯಕ್ಷ ಲ್ಯಾನ್ಸಿ ಪಿಂಟೋ, ಮಹಾನಗರ ಪಾಲಿಕೆ ಸದಸ್ಯ ಅಶೋಕ್ ಡಿ.ಕೆ., ಅಮ್ರತ ಕದ್ರಿ, ಜನರಾಜ್, ಮೋಹನ್ ಕೊಪ್ಪಳ, ಶ್ರೀ ಕೃಷ್ಞ ಜನ್ಮಾಷ್ಟಮಿ ಅಧ್ಯಕ್ಷ ಕಿರಣ ಜೋಗಿ, ರೋಹಿದಾಸ್ ಕದ್ರಿ, ಲೋಹಿತ್ ಶೆಟ್ಟಿ, ದಿನೇಶ್ ದೇವಾಡಿಗ, ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News