ಅಸೈಗೋಳಿ: ಬಾಲಮಂದಿರದಿಂದ ಬಾಲಕರ ಅಪಹರಣ ಶಂಕೆ

Update: 2016-08-27 14:25 GMT

ಮಂಗಳೂರು, ಆ. 27: ಆಗಸ್ಟ್ 26ರಂದು ಬೆಳಗ್ಗೆ 6 ಗಂಟೆಯಿಂದ 7 ಗಂಟೆ ಮಧ್ಯೆ ಸಮಯದಲ್ಲಿ ಮಂಗಳೂರು ತಾಲೂಕು ಕೊಣಾಜೆ ಗ್ರಾಮದ ಆಸೈಗೋಳಿಯಲ್ಲಿರುವ ಅಭಯಾಶ್ರಯದ ಅಭಯ ಬಾಲಮಂದಿರದಿಂದ ಇಬ್ಬರನ್ನು ಯಾರೋ ಪುಸಲಾಯಿಸಿ ಅಪಹರಿಸಿರುವ ಬಗ್ಗೆ ಶಂಕೆ ಇದ್ದು, ಪತ್ತೆಗೆ ಕೋರಲಾಗಿದೆ.

ಅಪಹರಣಕ್ಕೊಳಗಾದ ಬಾಲಕನನ್ನು ಹಾಸನ ಜಿಲ್ಲೆಯ ಬಸ್ತಿಹಳ್ಳಿಯ ನಿವಾಸಿ ದಿ.ಕುಮಾರ ಜೋಗಿ ಎಂಬವರ ಪುತ್ರ ಮಂಜುನಾಥ್ ಬಿ.ಕೆ (12) ಎಂದು ಗುರುತಿಸಲಾಗಿದೆ. ಎತ್ತರ-4.10 ಅಡಿ ಇದ್ದು, ಕನ್ನಡ ಭಾಷೆಯನ್ನು ಮಾತನಾಡಬಲ್ಲವನಾಗಿದ್ದಾನೆ. ಕೆಂಪು ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದು, ಎಣ್ಣೆ ಕಪ್ಪು ಚಹರೆ, ಗೋಧಿ ಮೈಬಣ್ಣ, ಸಪೂರ, ಶರೀರ, ಕೋಲು ಮುಖ ಹೊಂದಿದ್ದಾನೆ.

ಇನ್ನೋರ್ವ ಬಾಲಕ ಬಾಗಲಕೋಟೆ ಜಿಲ್ಲೆಯ ನಂದವಾಡಗಿಯ ಹನಗುಂದ ತಾಲೂಕಿನ ಶಿವರಾಯಪ್ಪ ನಾಗೂರು ಎಂಬವರ ಪುತ್ರ ಮುತ್ತಪ್ಪ (12) ಎಂದು ಗುರುತಿಸಲಾಗಿದೆ. 5.5 ಅಡಿ ಎತ್ತರವಿದ್ದು, ಕನ್ನಡ ಭಾಷೆ ಬಲ್ಲವನಾಗಿದ್ದಾನೆ. ಬಿಳಿಗೆರೆ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದು, ಸಪೂರ ಶರೀರ, ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದಾನೆ.

ಈ ಬಾಲಕರನ್ನು ಯಾರೋ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರಬಹುದಾಗಿದ್ದು, ಇಬ್ಬರು ಬಾಲಕರು ಎಲ್ಲಿಯಾದರೂ ಕಂಡುಬಂದಲ್ಲಿ ಪೊಲೀಸ್ ನಿರೀಕ್ಷಕರು ಕೊಣಾಜೆ ಠಾಣೆ, ಮಂಗಳೂರು, ದೂರವಾಣಿ ಸಂಖ್ಯೆ 0824-2220536, 9480802350, 0824-2220800 ಸಂಪರ್ಕಿಸಲು ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News