‘ಅಷ್ಟಮಿ ವೇಷ’ದಿಂದ ಸಂಗ್ರಹಿಸಿದ ಹಣ ಹಸ್ತಾಂತರ

Update: 2016-08-28 18:38 GMT

ಉಡುಪಿ, ಆ.28: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸುಧಾಕರ್ ಮತ್ತು ಕಿಶನ್ ಎಂಬವರು ಹಾಲಿವುಡ್ ವೇಷಧರಿಸಿ ಸಂಗ್ರಹಿಸಿದ ಹಣವನ್ನು ಕಟಪಾಡಿಯ ಮಮತಾ ಮತ್ತು ಉಮೇಶ್ ದಂಪತಿ ಪುತ್ರಿ ಅಶ್ವಿನಿಯವರ ಶಿಕ್ಷಣ ಮತ್ತು ಚಿಕಿತ್ಸೆಗಾಗಿ ನೀಡಲಾಯಿತು.
ಕಟಪಾಡಿ ಬಬ್ಬುಸ್ವಾಮಿ ಸನ್ನಿಧಿಯಲ್ಲಿ ರವಿವಾರ ಈ ದೇಣಿಗೆಯನ್ನು ಅಶ್ವಿನಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಹರಿಶ್ಚಂದ್ರ, ತುಕಾರಾಮ್ ಉರ್ವಾ, ಯಶವಂತ, ಸುದೀಪ್, ಜಯಕರ, ಕೌಶಿಕ್, ಸಂದೇಶ್, ಹರ್ಷಿತ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News