ಗೋಳಿತ್ತೊಟ್ಟು: ಲಾರಿ ಪಲ್ಟಿ; ಚಾಲಕ ಪಾರು

Update: 2016-08-28 18:38 GMT

ಉಪ್ಪಿನಂಗಡಿ, ಆ.28: ಇಲ್ಲಿನ ಗೋಳಿತೊಟ್ಟು ಸಮೀಪ ಸೇತುವೆಗೆ ಢಿಕ್ಕಿ ಹೊಡೆದ ಲಾರಿಯೊಂದು 20 ಅಡಿ ಆಳಕ್ಕೆ ಬಿದ್ದ ಘಟನೆ ರವಿವಾರ ರಾತ್ರಿ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ಕಳೆದುಕೊಂಡು ಗೋಳಿತ್ತೊಟ್ಟು ಸೇತುವೆ ತಡೆಬೇಲಿಗೆ ಢಿಕ್ಕಿ ಹೊಡೆದು ಹೊಳೆಗೆ ಬಿದ್ದಿದೆ. ಲಾರಿ ತಲೆಕೆಳಗಾಗಿ ಬಿದ್ದಿದ್ದರೂ ಚಾಲಕ ಪವಾಡ ಸದೃಶ್ಯ ವಾಗಿ ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News