×
Ad

ಉಡುಪಿ ಜಿಲ್ಲಾ ಕಸಾಪದಿಂದ ಹಳ್ಳಿಯ ಕಡೆಗೆ ಸಾಹಿತ್ಯ: ಅಡಿಗ

Update: 2016-08-29 23:36 IST

ಹೆಬ್ರಿ, ಆ.29: ಜಿಲ್ಲೆಯಲ್ಲಿ ಹೋಬಳಿ ಘಟಕಗಳನ್ನು ಸ್ಥಾಪಿಸುವ ಮೂಲಕ ಸಾಹಿತ್ಯ ಮತ್ತು ಸಾಹಿತ್ಯ ಪರಿಷತ್ತನ್ನು ಹಳ್ಳಿಯ ಕಡೆಗೆ ಕೊಂಡೊಯ್ಯುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.
 
 ರವಿವಾರ ಅಜೆಕಾರಿನಲ್ಲಿ ‘ಸಾಹಿತ್ಯ ಮತ್ತು ಜೀವನ ವರ್ಷ’ದ ಘೋಷ ವಾಕ್ಯದೊಂದಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಜೆಕಾರು ಹೋಬಳಿ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನೂತನ ಅಜೆಕಾರು ಹೋಬಳಿ ಘಟಕ ಅತ್ಯುತ್ತಮ ಕೆಲಸದ ಮೂಲಕ ಎಲ್ಲರಿಗು ಮಾದರಿಯಾಗಿ ಕನ್ನಡದ ಸೇವೆ ನಡೆಸಲಿ ಎಂದವರು ಹಾರೈಸಿದರು. ಪ್ರಸಿದ್ಧ ಸಂಗೀತ ತಜ್ಞ ನಾದವೈಭವಂ ಉಡುಪಿ ವಾಸುದೇವ ಭಟ್, ಹೊಟೇಲ್ ಉದ್ಯಮಿ ಹಾಗೂ ಸಮಾಜ ಸೇವಕ ಉಡುಪಿ ವಿಶ್ವನಾಥ ಶೆಣೈ, ಕರ್ನಾಟಕ ಗಮಕ ಕಲಾ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್ ನಿಟ್ಟೆ ಮತ್ತು ಅಜೆಕಾರು ಡಾ.ಸಂತೋಷ ಕುಮಾರ್ ಶೆಟ್ಟಿ ಸೇರಿ ಐವರು ಸಾಲು ಹಣತೆ ಬೆಳಗಿ ಹೋಬಳಿ ಘಟಕದ ದಿನಚರಿ ಬಿಡುಗಡೆಗೊಳಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್‌ಗೆ ಶುಭಾರಂಭ ನೀಡಿದರು.

ಅಜೆಕಾರು ಹೋಬಳಿ ಘಟಕದ ಸ್ಥಾಪಕಾಧ್ಯಕ್ಷ ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ತಜ್ಞ ವೈದ್ಯರಾದ ಉಡುಪಿಯ ಡಾ.ರಾಜಾ, ಡಾ.ಜಿ.ಎಸ್.ಚಂದ್ರಶೇಖರ್, ವಿಷವೈದ್ಯ ಅಜೆಕಾರು ಶಂಕರ ಶೆಟ್ಟಿ ಮತ್ತು ಬಾಲ ಪ್ರತಿಭನೆ ರೇಮೋನಾ ಇವೆಟ್ ಪಿರೇರಾ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಜೆಕಾರು ಚರ್ಚಿನ ಅಮಿತ್ ರೋಡ್ರಿಗಸ್, ಕಸಾಪ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಅಜೆಕಾರು ಮರ್ಣೆ ಗ್ರಾಪಂ ಅಧ್ಯಕ್ಷ ದಿನೇಶ್, ನ್ಯಾಯವಾದಿ ಹರೀಶ ಅಧಿಕಾರಿ, ಅಂಶುಮಾಲಿ, ಉಡುಪಿ ಜಿಲ್ಲಾ ಕಸಾಪ ಗೌರವ ಪ್ರಧಾನ ಕಾರ್ಯದರ್ಶಿ ಸೂರಾಲು ನಾರಾಯಣ ಮಡಿ, ಸುಬ್ರಹ್ಮಣ್ಯ ಶೆಟ್ಟಿ, ಹೆಬ್ರಿ ಘಟಕದ ಅಧ್ಯಕ್ಷ ಕಬ್ಬಿನಾಲೆ ಸೀತಾರಾಮ ಹೆಬ್ಬಾರ್, ಅಜೆಕಾರು ಘಟಕದ ಗೌರವ ಪ್ರಧಾನ ಕಾರ್ಯದರ್ಶಿ ಪತ್ರಕರ್ತ ಸುಕುಮಾರ್ ಮುನಿಯಾಲ್ ಮತ್ತಿತರರು ಉಪಸ್ಥಿತರಿದ್ದರು.

ಪತ್ರಕರ್ತಸುಕುಮಾರ್ ಮುನಿಯಾಲ್ ಸ್ವಾಗತಿಸಿ ಅಶ್ವಿನಿ ಬಿ.ಕೆ. ಉಗ್ರಾಣಿಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ಕಾಮತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News